ಚಂದ್ರವಳ್ಳಿ ನ್ಯೂಸ್, ಬೆಂಗಳೂರು :
ಯಾದಗಿರಿ ಎಕ್ಸ್ಪ್ರೆಸ್ಪತ್ರಿಕೆಯ ಸಂಪಾದಕರು ಹಾಗೂ ವೈಷ್ಣವಿ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷರಾದ ಕುಮಾರ ಸ್ವಾಮಿಅವರಿಗೆ ಸನ್ ರೈಸ್ಇಂಟರ್ನ್ಯಾಷನಲ್ ಯುನಿವರ್ಸಿಟಿ ವತಿಯಿಂದ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಯಿತು.
ಕುಮಾರ ಸ್ವಾಮಿ ಅವರು ಕಳೆದ ಒಂದೂವರೆ ದಶಕಗಳ ಕಾಲ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಮಾಡಿದ ಸೇವೆ ಮತ್ತು ಅನಾಥ ಮಕ್ಕಳ ಹಾರೈಕೆ ಹಾಗೂ ಪೋಷಣೆ ಮಾಡುತ್ತ ಪಾಲಕರಿಲ್ಲದ ಮಕ್ಕಳಿಗೆ ನೆರವಾಗುವ ಇವರ ಸೇವೆಯನ್ನು ಗುರುತಿಸಿ ಇತ್ತಿಚ್ಚೆಗೆ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಗೌರವ ಡಾಕ್ಟರೇಟ್ ನೀಡಿ ಸನ್ಮಾನಿಸಲಾಯಿತು.

