ಅನಾರೋಗ್ಯದ ನಡುವೆಯೂ ಮತ ಚಲಾಯಿಸಿದ ವೃದ್ಧ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ​ದಾವಣಗೆರೆ:
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಇಂದು ಬಿರುಸಿನ ಮತದಾನ ನಡೆಯಿತು. ಬೆಳಿಗ್ಗೆಯಿಂದಲೇ ಮತದಾರರು ಉತ್ಸಾಹದಿಂದ ಮತಗಟ್ಟೆಗಳಿಗೆ ಆಗಮಿಸಿ ತಮ್ಮ ಹಕ್ಕನ್ನು ಚಲಾಯಿಸಿದರು. ಈ ಪ್ರಕ್ರಿಯೆಯಲ್ಲಿ ಕೆಲವು ವಿಶೇಷ ಕ್ಷಣಗಳು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾದವು.

​ಅನಾರೋಗ್ಯ ಮರೆತು ಮತದಾನ ಮಾಡಿದ ಸೀತಾರಾಮ್-
​ಚುನಾವಣಾ ಹಬ್ಬದಲ್ಲಿ 82 ವರ್ಷದ ವೃದ್ಧ ಸೀತಾರಾಮ್ ಅವರು ಮಾದರಿಯಾಗಿ ನಿಂತರು. ಪ್ರಸ್ತುತ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಇವರು
, ತೀವ್ರ ಅನಾರೋಗ್ಯದ ನಡುವೆಯೂ ಸ್ಟ್ರೆಚರ್ ಮೂಲಕ ಕೆ.ಆರ್. ಮಾರುಕಟ್ಟೆ ಸಮೀಪದ ಎಕ್ಸ್ ಮುನ್ಸಿಪಲ್ ಕಾಲೇಜು ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸಿದರು. “ಪ್ರಜಾಪ್ರಭುತ್ವದಲ್ಲಿ ಮತದಾನ ಅತ್ಯಂತ ಮುಖ್ಯ” ಎಂಬ ಸಂದೇಶವನ್ನು ಇವರು ಸಾರಿದರು.

- Advertisement - 

​ಮತಗಟ್ಟೆಯಲ್ಲಿ ಪುಟಾಣಿರಕ್ಷಕರು-
​ಆಜಾದ್ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಉರ್ದು ಶಾಲೆಯ (ಚೋಟಿ ಮಿಲ್ಲತ್) ಮತಗಟ್ಟೆಗಳಲ್ಲಿ ವಿಶೇಷ ದೃಶ್ಯವೊಂದು ಕಂಡುಬಂದಿತು. ಮತದಾನಕ್ಕೆ ಬಂದಿದ್ದ ತಾಯಿಯೊಂದಿಗೆ ಇಬ್ಬರು ಮಕ್ಕಳು ಪೊಲೀಸ್ ಹಾಗೂ ಯೋಧರ ಸಮವಸ್ತ್ರ ಧರಿಸಿ ಬಂದಿದ್ದರು. ಈ ಪುಟಾಣಿ
ಅಧಿಕಾರಿಗಳನ್ನುಕಂಡು ಮತದಾರರು ಹಾಗೂ ಸಿಬ್ಬಂದಿ ಮುಖದಲ್ಲಿ ಮಂದಹಾಸ ಮೂಡಿತು.

​ಚುನಾವಣಾ ಸಿದ್ಧತೆ ಮತ್ತು ಅಂಕಿ-ಅಂಶಗಳು-
​ಕ್ಷೇತ್ರದಲ್ಲಿ ಶಾಂತಿಯುತ ಮತ್ತು ವ್ಯವಸ್ಥಿತ ಮತದಾನಕ್ಕಾಗಿ ಚುನಾವಣಾ ಆಯೋಗವು ವ್ಯಾಪಕ ಸಿದ್ಧತೆಗಳನ್ನು ಮಾಡಿಕೊಂಡಿತ್ತು.

- Advertisement - 

ವಿವರ ಮಾಹಿತಿ-
ಒಟ್ಟು ಮತಗಟ್ಟೆಗಳು 284, ನಗರ ಪ್ರದೇಶದ ಮತಗಟ್ಟೆಗಳು 234, ಗ್ರಾಮೀಣ ಪ್ರದೇಶದ ಮತಗಟ್ಟೆಗಳು 50. ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ 1,500ಕ್ಕೂ ಹೆಚ್ಚು. ವಿಶೇಷ ಮತಗಟ್ಟೆಗಳು 2 ಪಿಂಕ್ ಮತಗಟ್ಟೆ
, 1 ವಿಶೇಷಚೇತನರ ಮತಗಟ್ಟೆ, 1 ಯುವ ಮತದಾರರ ಮತಗಟ್ಟೆ.

ಭದ್ರತೆ: ಸೂಕ್ಷ್ಮ ಹಾಗೂ ಅತಿಸೂಕ್ಷ್ಮ ಮತಗಟ್ಟೆಗಳಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಹೆಚ್ಚುವರಿ ಪೊಲೀಸ್ ಭದ್ರತೆಯನ್ನು ನಿಯೋಜಿಸಲಾಗಿತ್ತು. ಸಿಬ್ಬಂದಿಗಳ ಸುಗಮ ಸಂಚಾರಕ್ಕಾಗಿ ವಾಹನಗಳ ವ್ಯವಸ್ಥೆಯನ್ನೂ ಕಲ್ಪಿಸಲಾಗಿತ್ತು.

 

 

 

Share This Article
error: Content is protected !!
";