ಗಣಪತಿ ವಿರ್ಜನೆಗೆ ಡೊಳ್ಳು ವಿವಾದ: ಗಲಾಟೆ, 6 ಜನರಿಗೆ ಗಾಯ

khushihost

ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ :
ಗಣಪತಿ ಮೂರ್ತಿ ವಿಸರ್ಜನಾ ಮೆರವಣಿಗೆ ವೇಳೆ ಡೊಳ್ಳು ಬಾರಿಸುವ ವಿಚಾರಕ್ಕೆ ಗಲಾಟೆ ನಡೆದು ಪೊಲೀಸರೇ ವಿಸರ್ಜನೆ ನಡೆಸಿದ ಘಟನೆ ಅರೆಬಿಳಚಿ ಕ್ಯಾಂಪಿನಲ್ಲಿ ನಡೆದಿದೆ.

- Advertisement - 

ಈ ವೇಳೆ ನಡೆದ ಗಲಾಟೆಯಲ್ಲಿ ಪೊಲೀಸರಿಗೂ ಸಣ್ಣಪುಟ್ಟ ಗಾಯವಾಗಿದೆ., ಗಲಾಟೆ ತಾರಕಕ್ಕೆ ಏರಿದ ಪರಿಣಾಮ ಪೊಲೀಸರು ಮಧ್ಯಪ್ರವೇಶಿಸಿ ಗಣಪತಿಯನ್ನ ವಿಸರ್ಜನೆ ಮಾಡಿರುವುದಾಗಿ ಎಸ್ಪಿ ಮಿಥುನ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.

- Advertisement - 

ಅರಬಿಳಚಿ ಕ್ಯಾಂಪ್‌ನಲ್ಲಿ ತಮಿಳರ ಮತ್ತು ಬೋವಿ ಕಾಲನಿಯ ಗಣಪತಿಯನ್ನು ಪ್ರತ್ಯೇಕ ಕೂಡ್ರಿಸಲಾಗಿದ್ದು, ವಿಸರ್ಜನೆಗೆ ಒಂದೇ ಡೊಳ್ಳಿನ ತಂಡದವರಿಗೆ ಆಮಂತ್ರಿಸಲಾಗಿತ್ತು.

ತಂಡದವರು ಬಂದಾಗ ತಮ್ಮ ಗಣಪತಿ ವಿಸರ್ಜನೆಗೆ ಬರಬೇಕೆಂದು ಇತ್ತಂಡದವರೂ ಹಠ ಹಿಡಿದಾಗ ಗಲಾಟೆ ನಡೆದಿದೆ‌ . ಡೊಳ್ಳು ಬಾರಿಸುವವರ ಜೊತೆ ವಾಗ್ವಾದ ನಡೆದಿದೆ. ವಾಗ್ವಾದ ವಿಕೋಪಕ್ಕೆ ತಿರುಗಿ ಪೊಲೀಸ್ ಸೇರಿದಂತೆ ಆರು ಮಂದಿಗೆ ಗಾಯವಾಗಿದೆ. ಗಾಯಾಳುಗಳು ಭದ್ರಾವತಿ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ಘಟನೆ ಕುರಿತು ಹೊಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement - 

Share This Article
error: Content is protected !!
";