ಬಡ ರೈತರ, ದಲಿತರ ಭೂಮಿ ಕಿತ್ತುಕೊಳ್ಳುತ್ತಿರುವ ಸಚಿವ ಜಮೀರ್ ರಾಜೀನಾಮೆ ನೀಡಲಿ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ವಕ್ಫ್ ಕಾಯ್ದೆಯಡಿಯಲ್ಲಿ ಬಡವರ
, ರೈತರ, ದಲಿತರ ಭೂಮಿ ಕಿತ್ತುಕೊಳ್ಳುತ್ತಿರುವ ಕಾಂಗ್ರೆಸ್ ಸಚಿವ ಜಮೀರ್ ಅವರು ರಾಜೀನಾಮೆ‌ನೀಡಬೇಕು ಎಂದು ವಿಧಾನ ಪರಿಷತ್ ಸದಸ್ಯ ರವಿಕುಮಾರ್, ಚಿತ್ರದುರ್ಗ ಲೋಕಸಭಾ ಸದಸ್ಯ ಗೋವಿಂದ್ ಎಂ.ಕಾರಜೋಳ ಆಗ್ರಹ ಮಾಡಿದ್ದಾರೆ.

- Advertisement - 

ಸಚಿವ ಜಮೀರ್ ಅವರು ಟಿಪ್ಪು ಸುಲ್ತಾನ್‌ನಂತೆ ನಡೆದುಕೊಳ್ಳುತ್ತಿದ್ದಾರೆ.
ದಲಿತರಿಗೆ ಭೂಮಿ ಒದಗಿಸಬೇಕಾಗಿದ್ದ ಸರ್ಕಾರ ಇಂದು ವಕ್ಫ್ ಆಸ್ತಿಗಾಗಿ ಅವರಿಂದಲೇ ಭೂಮಿ ಕಿತ್ತುಕೊಳ್ಳುತ್ತಿದೆ. ಕಾಂಗ್ರೆಸ್ ಸರ್ಕಾರ ತುಘಲಕ್ ಮಾದರಿಯ ಆಡಳಿತ ನಡೆಸುತ್ತಿದೆ ಎಂದು ಅವರು ವಾಗ್ದಾಳಿ ಮಾಡಿದ್ದಾರೆ.

- Advertisement - 

ವಕ್ಫ್ ಕಾಯ್ದೆಯ ಕುರಿತು ಪರಾಮರ್ಶಿಸಲು ಸಂಸತ್ತಿನಲ್ಲಿ ಜಂಟಿ ಸದನ ಸಮಿತಿ ರಚಿಸಿರುವ ನಡುವೆಯೇ ರಾಜ್ಯ ಕಾಂಗ್ರೆಸ್ ಸರ್ಕಾರ ರೈತರ, ದಲಿತರ ಭೂಮಿಯನ್ನು ಕಿತ್ತುಕೊಳ್ಳಲು ಹೊರಟಿರುವುದು ಅಸಾಂವಿಧಾನಿಕವಾಗಿದೆ ಎಂದು ಅವರು ಟೀಕಿಸಿದ್ದಾರೆ.

 

- Advertisement - 

Share This Article
error: Content is protected !!
";