ನ.19ರಂದು ಜೀವಜಾಲ ಮತ್ತು ಜೇನು ಕೃಷಿ ಕುರಿತು ವಿಚಾರ  ಸಂಕಿರಣ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಕೃಷಿ ತಂತ್ರಜ್ಞರ ಸಂಸ್ಥೆ ಹಾಗೂ ಕೃಷಿ ಇಲಾಖೆ ಸಹಯೋಗದಲ್ಲಿ ಇದೇ .19ರಂದು ಬೆಳಿಗ್ಗೆ 10ಕ್ಕೆ ನಗರದ ಎಪಿಎಂಸಿ ಆವರಣದ ಬ್ಲಾಕ್ ಹಮಾಲರ ಕ್ವಾಟರ್ಸ್ ಕೃಷಿ ತಂತ್ರಜ್ಞರ ಸಂಸ್ಥೆಯಲ್ಲಿ ವಿಚಾರ ಸಂಕಿರಣ ಏರ್ಪಡಿಸಲಾಗಿದೆ.

- Advertisement - 

ವಿಚಾರ ಸಂಕಿರಣದಲ್ಲಿ ಬೆಂಗಳೂರು ಜಿಕೆವಿಕೆ ಕೃಷಿ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಹಾಗೂ ಹೆಸರಾಂತ ವಿಜ್ಞಾನಿ ಡಾ. ಕೆ.ಎಸ್ ಗಣೇಶಯ್ಯ ಅವರು ಜೀವಜಾಲದ ಸ್ಥಿರತೆ ಕಾಪಾಡುವ ಅಗೋಚರ ಕೊಂಡಿಗಳು ಮತ್ತು

- Advertisement - 

ಡಾ ವಿ.ವಿ.ಬೆಳವಾಡಿ ಅವರು ಪರಾಗಸ್ಪರ್ಶಕ್ಕಾಗಿ ಜೇನು ನೊಣಗಳ ಸಂರಕ್ಷಣೆ ಎಂಬ ವಿಷಯ ಕುರಿತು ಉಪನ್ಯಾಸ ನೀಡಲಿದ್ದಾರೆ. ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಕೃಷಿ ತಂತ್ರಜ್ಞರ ಸಂಸ್ಥೆಯ ಕಾರ್ಯದರ್ಶಿ ಜಿ.ಟಿ ವೀರಭದ್ರ ರೆಡ್ಡಿ ಕೋರಿದ್ದಾರೆ.

- Advertisement - 

 

Share This Article
error: Content is protected !!
";