ಕಾಂಗ್ರೆಸ್‌ ನಾಯಕರಿಗೆ ಒಂದು ಕಾನೂನು? ಬೇರೆಯವರಿಗೆ ಒಂದು ಕಾನೂನು?

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕಾಂಗ್ರೆಸ್‌ಸರ್ಕಾರದಲ್ಲಿ ಕಾಂಗ್ರೆಸ್‌ನಾಯಕರಿಗೆ ಒಂದು ಕಾನೂನು ? ಬೇರೆಯವರಿಗೆ ಒಂದು ಕಾನೂನು ? ಎಂದು ಜೆಡಿಎಸ್ ವಾಗ್ದಾಳಿ ಮಾಡಿದೆ.

ವಿಧಾನಸೌಧದಲ್ಲೇ ರಾಜ್ಯಸಭೆ ಸದಸ್ಯ ನಾಸೀರ್‌ಹುಸೇನ್‌ಬೆಂಬಲಿಗರು ಪಾಕಿಸ್ತಾನ್‌ಪರ ಘೋಷಣೆ ಕೂಗಿದ್ದರು. ದೇಶದ್ರೋಹಿ ಘೋಷಣೆ ಕೂಗಿದ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗಲು ನಾಸೀರ್‌ಹುಸೇನ್‌ಗೆ 90 ಬಾರಿ ನೋಟಿಸ್‌ನೀಡಿದ್ದರೂ, ಪೊಲೀಸರ ವಿಚಾರಣೆಗೆ ಹಾಜರಾಗಿಲ್ಲ ಎಂದು ಜೆಡಿಎಸ್ ಪ್ರಶ್ನಿಸಿದೆ.

- Advertisement - 

ಸಿದ್ದರಾಮಯ್ಯ ಸರ್ಕಾರ ನಾಸೀರ್‌ಹುಸೇನ್‌ಬೆನ್ನಿಗೆ ನಿಂತು ರಕ್ಷಿಸುತ್ತಿದೆ. ಇದೇ ಕಾರಣಕ್ಕೆ 9 ತಿಂಗಳಾದರೂ ಈ ಪ್ರಕರಣದಲ್ಲಿ ಪೊಲೀಸರು ಚಾರ್ಜ್‌ಶೀಟ್‌ಹಾಕದೇ ಕಾಲಹರಣ ಮಾಡುತ್ತಿದ್ದಾರೆ.

ಕರ್ನಾಟಕ ಕಾಂಗ್ರೆಸ್ ರಾಜ್ಯಸಭೆ ಸದಸ್ಯ ನಾಸೀರ್‌ಹುಸೇನ್‌ಕಾನೂನಿಗಿಂತ ದೊಡ್ಡವರೇ ? ಸಂವಿಧಾನದ ಬಗ್ಗೆ ಮಾತನಾಡುವ ಸಿದ್ದರಾಮಯ್ಯ, ಗೃಹ ಸಚಿವ ಡಾ.ಜಿ.ಪರಮೇಸ್ವರ್ ನಿಮ್ಮ ಪೌರುಷ, ತಾಕತ್ತು ನಾಸೀರ್‌ಹುಸೇನ್‌ಅವರ ಪ್ರಕರಣದಲ್ಲಿ ಯಾಕಿಲ್ಲ ? ಎಂದು ಜೆಡಿಎಸ್ ಖಾರವಾಗಿ ಪ್ರಶ್ನಿಸಿದೆ.

- Advertisement - 

 

Share This Article
error: Content is protected !!
";