ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೆಳಗಾವಿಯಲ್ಲಿ ಮಹಾತ್ಮ ಗಾಂಧಿ ಹೆಸರಲ್ಲಿ ಮಾಡುತ್ತಿರುವ ಸಮಾವೇಶದಲ್ಲಿ ಆಧುನಿಕ ಗಾಂಧಿಗಳ ಕಟೌಟ್ಗಳೇ ರಾರಾಜಿಸುತ್ತಿವೆ ಎಂದು ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವ ಹೆಚ್.ಡಿ ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಬೆಳಗಾವಿಯಲ್ಲಿ ಗಾಂಧೀಜಿ ಶತಮಾನೋತ್ಸವ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯುತ್ತಿದೆ. ಆದರೆ, ಅಲ್ಲಿನ ಕಟೌಟ್ಗಳಲ್ಲಿ ಗಾಂಧೀಜಿಯೇ ಇಲ್ಲ. ಕಟೌಟ್ಗಳಲ್ಲಿ ಈಗ ಆಧುನಿಕ ಗಾಂಧಿಗಳಿದ್ದಾರೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಟೀಕಿಸಿದ್ದಾರೆ.
ಗಾಂಧೀಜಿ ಅವರ ಹೆಸರಲ್ಲಿ ಒಂದು ವರ್ಷದ ಕಾರ್ಯಕ್ರಮ ಮಾಡ್ತಾರಂತೆ. ದೊಡ್ಡ ದೊಡ್ಡ ಆಕಾಶ ಎತ್ತರಕ್ಕೆ ಕಟೌಟ್ಗಳನ್ನು ನೋಡಿದೆ. ಇವತ್ತು ರಾಜ್ಯ ಸರ್ಕಾರವನ್ನು ಮೃಗೀಯವಾಗಿ ನಡೆಸುತ್ತಿದ್ದಾರೆ.
ಅಂತಹ ಕಾಂಗ್ರೆಸ್ನವರು ಗಾಂಧೀಜಿ ಸ್ಮರಣೆ ಮಾಡುತ್ತಾರಾ?. ಇದರ ಬಗ್ಗೆ ಮುಂದೆ ಮಾತಾಡೋಣ ಎಂದು ಕುಮಾರಸ್ವಾಮಿ ತಿಳಿಸಿದರು.

