ನಾಗಸಾಧು ರಾಜ್​​ ನಾಥ್​ ಮಹಾರಾಜ್​ ಸ್ವಾಮೀಜಿ ಸಹಜ ಸಾವು-ಜಿಲ್ಲಾಧಿಕಾರಿ ವೆಂಕಟೇಶ್

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಸಿದ್ಧಿ ಸಾಧಕ
, ನಾಗಸಾಧು ರಾಜ್​​ ನಾಥ್​ ಮಹಾರಾಜ್​ ಸ್ವಾಮೀಜಿ ಅವರದ್ದು ಸಹಜವಾಗಿ ಸಾವನ್ನಪ್ಪಿದ್ದಾರೆ ಎಂದು ಚಿತ್ರದುರ್ಗದ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸ್ಪಷ್ಟಪಡಿದ್ದಾರೆ.

ಈ ಬಗ್ಗೆ ವೆಂಕಟೇಶ್ ಪತ್ರಿಕಾ ಪ್ರಕಟಣೆ‌ಬಿಡುಗಡೆ ಮಾಡಿದ್ದಾರೆ. ಪ್ರಯಾಗ್​ ರಾಜ್​ ಕುಂಭಮೇಳದ ಕಾಲ್ತುಳಿತದಿಂದ ಸ್ವಾಮೀಜಿ ಸಾವನ್ನಪ್ಪಿಲ್ಲ ಎಂದು ಅವರು ಹೇಳಿದ್ದಾರೆ.
ನಾಗಸಾಧು ರಾಜನಾಥ್ ಸ್ವಾಮೀಜಿ ಅವರು ಝಾನ್ಸಿಯ ರೈಲ್ವೆ ನಿಲ್ದಾಣದಲ್ಲಿ ಅವರ ಅಸಹಜ ಸಾವಾಗಿದೆ. ಈ ಪ್ರಕರಣಕ್ಕೂ ಕಾಲ್ತುಳಿತಕ್ಕೂ ಸಂಬಂಧವಿಲ್ಲ ಎಂದು ರೈಲ್ವೆ ಇಲಾಖೆ ಅಧಿಕಾರಿಗಳ ಮಾಹಿತಿ ಮೇರೆಗೆ ಡಿಸಿ ಸ್ಪಷ್ಟನೆ ನೀಡಿದ್ದಾರೆ.

- Advertisement - 

ಈ ಹಿನ್ನೆಲೆ ಚಿತ್ರದುರ್ಗದ ಬಂಜಾರ ಗುರುಪೀಠದ ಪೀಠಾಧಿಪತಿ ಸರ್ಧಾರ್ ಸೇವಾಲಾಲ್ ಶ್ರೀ ಪ್ರತಿಕ್ರಿಯಿಸಿದ್ದಾರೆ. ಸಿದ್ಧಿ ಸಾಧಕ ರಾಜ್ ನಾಥ ಮಹಾರಾಜ್ ಕುಂಭಮೇಳದ ಯಾತ್ರೆಗೆ ತೆರಳಿದ್ದರು. ನಾಗಸಾಧು ಕಾಲ್ತುಳಿತದಿಂದ ಸಾವನ್ನಪ್ಪಿಲ್ಲ, ಸಹಜ ಸಾವು ಎನ್ನಲಾಗುತ್ತಿದೆ. ರಾಜ್ ನಾಥ್ ಸಾವು ಹೇಗೆ ಆಯ್ತು, ಯಾಕೆ ಆಯ್ತು ನಮಗೆ ಗೊತ್ತಿಲ್ಲ. ನಮಗಿರುವ ಮಾಹಿತಿ ಪ್ರಕಾರ ಕುಂಭಮೇಳದ ನೂಕುನುಗ್ಗಲಲ್ಲಿ ಸಾವೆಂದು ತಿಳಿದಿದೆ.

ಮಾಹಿತಿ ಆಧಾರದ ಮೇಲೆ ಮಾಧ್ಯಮಗಳ ಮುಂದೆ ಅಭಿಪ್ರಾಯ ವ್ಯಕ್ತಪಡಿಸಿದ್ದೇನೆ. ಸರ್ಕಾರ ಗುರು ಪರಂಪರೆಯಂತೆ ಸಾಧುಗಳ ಅಂತ್ಯ ಸಂಸ್ಕಾರಕ್ಕೆ‌ಅವಕಾಶ ಕಲ್ಪಿಸಬೇಕು. ಮಾನವೀಯತೆ ದೃಷ್ಟಿಯಿಂದ ಜಿಲ್ಲಾಡಳಿತ, ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ನಾಗಸಾಧುಗಳ ಶವ ಅನಾಥ ಶವವಾಗಿ ಬಿದ್ದಿರುವುದು ಸರಿಯಲ್ಲ. ಎರಡು ಸರ್ಕಾರಗಳು ಚರ್ಚಿಸಿ ಪಾರ್ಥೀವ ಶರೀರ ಶ್ರೀಮಠಕ್ಕೆ ತಲುಪಿಸಬೇಕು ಎಂದು ಸೇವಾಲಾಲ್ ಶ್ರೀಗಳು ಮನವಿ ಮಾಡಿದ್ದಾರೆ.

- Advertisement - 

 

Share This Article
error: Content is protected !!
";