ಸರ್ಕಾರಿ ಡಿಪ್ಲೋಮಾ ಕಾಲೇಜ್ ಉಪನ್ಯಾಸಕ ಅರುಣ್ ಅವರ ತಾಯಿ ಉಮಾದೇವಿ ಇನ್ನಿಲ್ಲ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ನಗರದ ಕೆಹೆಚ್ ಬಿ ಕಾಲೋನಿ ನಿವಾಸಿ ಹೆಚ್.ಎಂ.ಉಮಾದೇವಿ ತಿಪ್ಪೇಸ್ವಾಮಿ(78) ಅವರು ಶುಕ್ರವಾರ ನಿಧನರಾಗಿದ್ದಾರೆ.
ಕಳೆದ ಒಂದು ತಿಂಗಳಿಂದ ಅನಾರೋಗ್ಯ ಪೀಡಿತರಾಗಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಬಸವೇಶ್ವರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

- Advertisement - 

ಮೃತರು ಪತಿ ತಿಪ್ಪೇಸ್ವಾಮಿ, ಪುತ್ರ ಸರ್ಕಾರಿ ಡಿಪ್ಲೋಮಾ ಕಾಲೇಜ್ ಉಪನ್ಯಾಸಕ ಟಿ. ಅರುಣ್ ನಾಯಕ ಸೇರಿದಂತೆ ಅಪಾರ ಬಂಧು ಮಿತ್ರರನ್ನ ಅಗಲಿದ್ದಾರೆ.

- Advertisement - 

ಮೃತದೇಹ ದಾನ-
ತಾಯಿ ಉಮಾದೇವಿ, ತಂದೆ ತಿಪ್ಪೇಸ್ವಾಮಿ ಅವರ ಇಚ್ಛೆಯಂತೆ ಅಮ್ಮನವರ ಮೃತ ದೇಹವನ್ನು ಬಸವೇಶ್ವರ ಆಸ್ಪತ್ರೆಗೆ ದಾನ ನೀಡಲಾಗಿದೆ. ಮೃತದೇಹವನ್ನು ಮಣ್ಣಿನಲ್ಲಿ ಹೂತು ಹಾಕದೆ ಇದು ವೈದ್ಯಕೀಯ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ದಾನ ನೀಡಲಾಗಿದೆ ಎಂದು ಪುತ್ರ ಟಿ.ಅರುಣ್ ನಾಯಕ ತಿಳಿಸಿದ್ದಾರೆ.

ಕಂಬನಿ- ಉಮಾದೇವಿ ಅವರ ನಿಧನಕ್ಕೆ ಕೆಹೆಚ್ ಬಿ ಕಾಲೋನಿ ನಿವಾಸಿಗಳು ಸಂತಾಪ ಸೂಚಿಸಿ ಸಾವಿನ ನೋವು ತಡೆದುಕೊಳ್ಳುವ ಶಕ್ತಿಯನ್ನು ಆ ದೇವರು ದಯಪಾಲಿಸಲಿ ಎಂದು ಪ್ರಾರ್ಥಿಸಿದ್ದಾರೆ.

- Advertisement - 

Share This Article
error: Content is protected !!
";