![](https://www.chandravallinews.com/wp-content/uploads/2023/12/WhatsApp-Image-2023-12-06-at-5.04.07-PM-1024x472.jpeg)
i
ಜನಮುಖಿ-ಜನಪರ ಹೋರಾಟಕ್ಕೆ ಬೆಂಬಲ ನೀಡುತ್ತಿದ್ದ ಹೊಸಳ್ಳಿ ತಿಪ್ಪೇಸ್ವಾಮಿ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಜನಮುಖಿ-ಜನಪರ ಹೋರಾಟಕ್ಕೆ ಸದಾ ಬೆಂಬಲ ನೀಡುತ್ತಿದ್ದ ಹೊಸಳ್ಳಿ ತಿಪ್ಪೇಸ್ವಾಮಿ ಅವರು ವಿದ್ಯಾರ್ಥಿಗಳ ಚಳವಳಿ ಸಂದರ್ಭದಲ್ಲಿ ಉಪವಾಸ ಕೂಳಿತಾಗ ಸಲಹೆ ಸೂಚನೆಗಳನ್ನು ನೀಡುತ್ತಿದ್ದರು ಎಂದು ಹೋರಾಟಗಾರರೆಹಮಾನ್ ತಿಳಿಸಿದರು.ನಗರದ ಪತ್ರಕರ್ತರ ಭವನದಲ್ಲಿ ಏರ್ಪಡಿಸಿದ್ದ ಜನ ಚಳುವಳಿಗಳ ಒಡನಾಡಿ ಹೊಸಳ್ಳಿ ತಿಪ್ಪೇಸ್ವಾಮಿ ಅವರ ಶ್ರದ್ಧಾಂಜಲಿ ಮತ್ತು ಸ್ಮರಣೆ ಸಭೆಯಲ್ಲಿ ಅವರು ಮಾತನಾಡಿದರು. ಸ್ವಂತ ಅಣ್ಣನವರಂತೆ ನೋಡಿಕೊಳ್ಳುತ್ತಿದ್ದರು ಎಂದರು.ಪತ್ರಕರ್ತ ಚಳ್ಳಕೆರೆ ಬಸವರಾಜ್ ಮಾತನಾಡಿ ನೀರಾವರಿ ಹೋರಾಟಕ್ಕೆ ಬೆಂಬಲ ನೀಡಿದ್ದಲ್ಲದೆ ವಿದ್ಯಾರ್ಥಿ ಪರ, ಬಡವರ ಪರ ಸದಾ ಬೆಂಬಲ ನೀಡುತ್ತಿದ್ದರು ಎಂದರು.ಜನಪರ ಹೋರಾಟಗಳಲ್ಲಿ ಪಾಲ್ಗೊಳ್ಳುತ್ತಾ ಸಲಹೆ ಸೂಚನೆ ನೀಡುತ್ತಿದ್ದರು ಅವರ ಮಾರ್ಗದರ್ಶನದಲ್ಲಿ ನಾವು ಸಾಗಬೇಕು ಎಂದು ಹೇಳಿದರು.ಚಿಂತಕ, ವಿಶ್ರಾಂತ ಪ್ರಾಂಶುಪಾಲ ಜೆ.ಯಾದವರೆಡ್ಡಿ ಮಾತನಾಡಿ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ತಿಪ್ಪೇಸ್ವಾಮಿ ಜೊತೆ ಸೇರಿ ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ಕೂಗಿದ್ದೇವೆ ಎಂದು ಸ್ಮರಿಸಿದರು.ಎಂಬತ್ತು ತೊಂಬತ್ತರ ದಶಕದಲ್ಲಿ ಕೋಟೆನಾಡು ಬಹಳ ಸುಸ್ಥಿತಿಯಲ್ಲಿತ್ತು. ಆ ಸಂದರ್ಭದಲ್ಲಿ ರೂಪ ಎನ್ನುವ ಯುವತಿಯ ಕೊಲೆ ನಡೆದಾಗ ಮುಕ್ತ ವಿಚಾರ ವೇದಿಕೆ ರಚನೆ ಮಾಡಿಕೊಂಡು ಹೋರಾಟ ಮಾಡುತ್ತಿದ್ದೇವು. ಅಲ್ಲದೆ ಭದ್ರಾ ಅಧ್ಯಯನ ವರದಿ ಸಮಿತಿ ರಚನೆ ಮಾಡಿದಾಗ ತಿಪ್ಪೇಸ್ವಾಮಿ ಜೊತೆಯಲ್ಲಿ ಇದ್ದು ಬೆಂಬಲ ವ್ಯಕ್ತಪಡಿಸಿದರು. ನಾನು ಮತ್ತು ತಿಪ್ಪೇಸ್ವಾಮಿ ಇಬ್ಬರು ಸರ್ಕಾರಿ ನೌಕರಿಯಲ್ಲಿ ಇದ್ದು ಹೋರಾಟಕ್ಕೆ ಹೊರಗಿನಿಂದ ಬೆಂಬಲ ನೀಡುತ್ತಿದ್ದೇವು ಎಂದು ತಿಳಿಸಿದರು.ತಿಪ್ಪೇಸ್ವಾಮಿ ಅವರ ಮನೆಗೆ ಬರುವ ಅತಿಥಿಗಳಿಗೆ ಸತ್ಕಾರ ನೀಡುವ ಪರಿ ಮರೆಯಲು ಸಾಧ್ಯವಿಲ್ಲ ಎಂದು ಸ್ಮರಿಸಿದರು.ನಿವೃತ್ತಿ ನಂತರ ತಿಪ್ಪೇಸ್ವಾಮಿ ಕೆಲ ಕೆಟ್ಟ ಚಟಗಳನ್ನು ದೂರ ಮಾಡಿ ಆರೋಗ್ಯ ಕಾಪಾಡಿಕೊಂಡಿದ್ದರೆ ಮತ್ತಷ್ಟು ಕಾಲ ಬದುಕುತ್ತಿದ್ದರು ಎಂದು ತಿಳಿಸಿದರು.ಹಿರಿಯ ಪತ್ರಕರ್ತರಾದ ಜಿ.ಎಸ್.ಉಜ್ಜಿನಪ್ಪ ಮಾತನಾಡಿ ತಿಪ್ಪೇಸ್ವಾಮಿ ಸರ್ಕಾರಿ ಅಧಿಕಾರಿಯಾಗಿದ್ದುಕೊಂಡು ಹೋರಾಟ ಮಾಡುತ್ತಿದ್ದರು ಎಂದರು. ಸತ್ಕರಿಸುವ ಕೆಲಸ ಬಹಳ ಕಷ್ಟ. ಆದರೆ ಅವರ ಕುಟುಂಬದ ಯಜಮಾನಿ ಅವರನ್ನು ಸ್ಮರಿಸಬೇಕು. ತನಗಾಗಿ ಹೋರಾಟ ಮಾಡದೇ ಸಾರ್ವಜನಿಕರಿಗಾಗಿ ಹೋರಾಟ ಮಾಡುತ್ತಿದ್ದರು ಎಂದು ತಿಳಿಸಿದರು.ಪತ್ರಕರ್ತ ಎಂ.ಎನ್.ಅಹೋಬಲಪತಿ ಮಾತನಾಡಿ ಹಾಸ್ಟೆಲ್ ಅವ್ಯವಸ್ಥೆ ಬಗ್ಗೆ ಸುದ್ದಿ ಪತ್ರಿಕೆಗಳಲ್ಲಿ ಪ್ರಕಟವಾಯಿತು. ಆ ಸಂದರ್ಭದಲ್ಲಿ ತಿಪ್ಪೇಸ್ವಾಮಿ ಪರಿಚಯವಾಯಿತು. ನಿರಂತರ ಓದುತ್ತಾ ವಿಷಯ ತಿಳಿದುಕೊಳ್ಳುತ್ತಿದ್ದರು ಎಂದರು.ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಲು ರಾಜ್ಯ ಮಟ್ಟದ ಚಿಂತಕರನ್ನು ಕರೆಸಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದರು ಎಂದು ತಿಳಿಸಿದರು.ಹೋರಾಟ ಮತ್ತು ಹೋರಾಟಗಾರರಿಗೆ ತಿಪ್ಪೇಸ್ವಾಮಿ ಕೊಂಡಿಯಾಗಿ ಕೆಲಸ ಮಾಡುತ್ತಿದ್ದರು ಎಂದು ತಿಳಿಸಿದರು.ವಿಶ್ರಾಂತ ಅಧ್ಯಾಪಕ ಅಶೋಕ್ ಸಂಗೇನಹಳ್ಳಿ ಮಾತನಾಡಿ ಬಹುಮುಖಿಯಾಗಿದ್ದ ತಿಪ್ಪೇಸ್ವಾಮಿ ಅವರು ಜನಸ್ನೇಹಿಯಾಗಿ ಬಾಳಿದರು. ಸಾವು ನೋವುಗಳಿಗೆ ಹೆಗಲು ಕೊಡುತ್ತಿದ್ದರು. ಅವರಿಗೆ ಉದ್ಯೋಗ ಸಿಕ್ಕಾಗ ತಂದೆ ಶವ ಮನೆಯಲ್ಲಿತ್ತು. ಕರ್ತವ್ಯಕ್ಕೆ ಹಾಜರಾಗಿ ತಂದೆಯ ಶವ ಸಂಸ್ಕಾರ ಮಾಡಿದ್ದರು ಎಂದು ತಿಳಿಸಿದರು.ಸಮಾಜಕ್ಕೆ ಸಾಕಷ್ಟು ಕೊಡುಗೆಯನ್ನು ತಿಪ್ಪೇಸ್ವಾಮಿ ಮತ್ತು ಅವರ ಕುಟುಂಬ ಸದಸ್ಯರು ನೀಡಿದ್ದಾರೆ. ತಿಪ್ಪೇಸ್ವಾಮಿ ಸತ್ತಿರಬಹುದು ಆದರೆ ಅವರ ಚಿಂತನೆ, ಅವರು ಮಾಡಿರುವ ಹೋರಾಟ ಸೇವೆ ಮರೆಯಲು ಸಾಧ್ಯವಿಲ್ಲ ಎಂದು ತಿಳಿಸಿದರು.ಶಶಿಕಲಾ ತಿಪ್ಪೇಸ್ವಾಮಿ, ಹೋರಾಟಗಾರ ಕುಮಾರ ಸಮತಳ, ಮತ್ತಿತರರು ಇದ್ದರು.