ಕೇಂದ್ರ ಸರ್ಕಾರಕ್ಕೆ ನ್ಯಾ.ರೋಹಿಣಿ ನೀಡಿದ ವರದಿ ಏಕೆ ಜಾರಿಯಾಗಲಿಲ್ಲ

News Desk

ಚಂದ್ರವಳ್ಳಿ ನ್ಯೂಸ್, ಮಂಡ್ಯ:
ಕೇಂದ್ರ ಸರ್ಕಾರಕ್ಕೆ ನ್ಯಾ.ರೋಹಿಣಿ ಆಯೋಗ ಕೊಟ್ಟ ವರದಿ ಜಾರಿ ಮಾಡದ ವಿಚಾರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿ
, ಬಿಜೆಪಿ, RSSಗೆ ಸಾಮಾಜಿಕ ನ್ಯಾಯದಲ್ಲಿ ನಂಬಿಕೆ ಇಲ್ಲ. ಬದ್ಧತೆ ಇಲ್ಲ. ನೂರು ವರ್ಷದ ಇತಿಹಾಸ ನೋಡಿದರೆ ಅವರು ವಿರೋಧ ಮಾಡಿಕೊಂಡೆ ಬಂದಿದ್ದಾರೆ. RSS ಆರಂಭವಾಗಿ ನೂರು ವರ್ಷವಾಗುತ್ತಿದೆ.

- Advertisement - 

RSS ಯಾವತ್ತು ಮೀಸಲಾತಿ ಒಪ್ಪಿಲ್ಲ. ವರದಿ ಜಾರಿಗೆ ಕಳೆದ 2 ವರ್ಷಗಳಿಂದ ರಾಹುಲ್‌ಗಾಂಧಿ ಒತ್ತಾಯಿಸಿದ್ದರು. ಅದಕ್ಕೆ ಪ್ರಣಾಳಿಕೆಯಲ್ಲಿ ಸೇರಿಸಿದ್ದೆವು. ಸಾಮಾಜಿಕ, ಆರ್ಥಿಕ, ಶೈಕ್ಷಣಿಕವಾಗಿ ಹಿಂದುಳಿದವರಿಗೆ ಮೀಸಲಾತಿ ನೀಡಬೇಕು. ಶೇ.50ರಷ್ಟು ಇರುವ ಸೀಲಿಂಗ್ ತೆಗೆಯಬೇಕು, ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿ ತರಬೇಕು ಎಂದು ಮೋದಿಯವರಿಗೆ ಸಿಎಂ ಒತ್ತಾಯಿಸಿದರು.

- Advertisement - 

ರೋಹಿಣಿ ಆಯೋಗದ ವರದಿ ಯಾವಾಗ ಜಾರಿಗೆ ಮಾಡುತ್ತೀರಾ ಎಂಬುದನ್ನು ಖಚಿತವಾಗಿ ಹೇಳಬೇಕು. ರೋಹಿಣಿ ಆಯೋಗದ ಮೀಸಲಾತಿ ಜೊತೆ ಜಾತಿ ಗಣತಿಯನ್ನು ಮಾಡಬೇಕು ಎಂದು ಸಿದ್ದರಾಮಯ್ಯ ಆಗ್ರಹ ಮಾಡಿದರು.

ಸ್ಪೀಕರ್​ ಮತ್ತು ನನಗೂ ಬೆದರಿಕೆ ಕರೆ ಬಂದಿತ್ತು: ಯ.ಟಿ. ಖಾದರ್‌ಗೆ ಬೆದರಿಕೆ ಕರೆ ಬಂದ ವಿಚಾರಕ್ಕೆ ಸಿಎಂ ಪ್ರತಿಕ್ರಿಯೆ ನೀಡಿ, ನನಗೂ ಬೆದರಿಕೆ ಕರೆಗಳು ಬರುತ್ತವೆ. ಬಂದಿವೆ. ಸ್ಪೀಕರ್‌‌ಗೆ ಬಂದ ಬೆದರಿಕೆ ಕರೆ ಬಗ್ಗೆ ಪತ್ತೆ ಹಚ್ಚಿ ಕ್ರಮವಹಿಸಲು ಸೂಚಿಸಲಾಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

- Advertisement - 

 

Share This Article
error: Content is protected !!
";