ಗೆಲುವು ಎಂದರೆ ಇದೆ!!

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಆಪರೇಷನ್ ಸಿಂಧೂರ ಕಾರ್ಯಾಚರಣೆ ಸಮಯದಲ್ಲಿ ಪಾಕಿಸ್ತಾನದ ಪ್ರಮುಖ ವಾಯುನೆಲೆಗಳ ಮೇಲೆ ಭಾರತದ ಸೈನಿಕರು 90 ನಿಮಿಷಗಳ ದಾಳಿ ಮಾಡಿದ ರೀತಿ ನಮ್ಮ ಪ್ರಾದೇಶಿಕ ಮಿಲಿಟರಿ ಡೈನಾಮಿಕ್ಸ್‌ನ ಮಹತ್ತರ ಬದಲಾವಣೆಗೆ ಸಾಕ್ಷಿಯಾಗಿದೆ.

- Advertisement - 

ಈ ನಿಖರವಾದ ದಾಳಿಯು ನಮ್ಮ ವಾಯುಪಡೆಯ ಶ್ರೇಷ್ಠತೆಯನ್ನು ಹೆಚ್ಚಿಸುವ ಜೊತೆಗೆ, ಪಾಕಿಸ್ತಾನದ ಪ್ರತಿಕ್ರಿಯೆಯ ಸಾಮರ್ಥ್ಯವನ್ನೆ ಬುಡಮೇಲು ಮಾಡಿದೆ‌. ಪ್ರತಿಯೊಂದು ವಾಯುನೆಲೆಯ ಮೇಲಾದ ಹಾನಿ ಹಾಗೂ ಅವುಗಳ ವಿನಾಶ ಪಾಕಿಸ್ತಾನಿ ಮಿಲಿಟರಿಯ ಕಾರ್ಯತಂತ್ರ ಮತ್ತದರ ಮಾನಸಿಕ ಶಕ್ತಿಯನ್ನು ತೀವ್ರವಾಗಿ ಕುಂದಿಸಿದೆ.

- Advertisement - 

ಪಾಕಿಸ್ತಾನದ ಶಹಬಾಜ್‌ವಾಯುನೆಲೆ, ಜಾಕೋಬಬಾದ್‌, ನೂರ್‌ಖಾನ್‌ವಾಯುನೆಲೆ, ರಾವಲ್ಪಿಂಡಿ, ಪಾಕಿಸ್ತಾನ, ಸುಕ್ಕೂರ್ ವಾಯುನೆಲೆ, ಸಿಂಧ್,  ರಹೀಂ ಯಾರ್‌ಖಾನ್‌ವಿಮಾನ ನಿಲ್ದಾನ, ಪಿಎಎಫ್ ಮುಶಾಫ್‌ವಾಯುನೆಲೆ, ಸರ್ಗೋಧಾ, ಭೋಲಾರಿ ವಾಯುನೆಲೆ, ಸಿಂಧ್‌, ಲಾಹೋರ್‌ನಲ್ಲಿ ವಾಯು ರಕ್ಷಣಾ ವ್ಯವಸ್ಥೆ, ಪಿಎಎಫ್‌ವಾಯುನೆಲೆ, ರಫಿಕ್ವಿ ಪಾಕಿಸ್ತಾನ & ಚುನಿಯಾನ್‌ವಾಯು ರಕ್ಷಣಾ ರೇಡಾರ್‌, ಆರೀಫ್ವಾಲಾ ವಾಯು ರಕ್ಷಣಾ ರೇಡಾರ್‌, ಪ್ರಸೂರ್‌ವಾಯು ರಕ್ಷಣಾ ರೇಡಾರ್‌ ಗಳನ್ನು ಭಾರತೀಯ ಸೈನಿಕ ಪಡೆ ನಾಶ ಮಾಡಿದೆ.

- Advertisement - 
Share This Article
error: Content is protected !!
";