ಆರ್‌ಸಿಬಿ ಹಾಗೂ ಕೆಕೆಆರ್ ಕ್ರಿಕೆಟ್ ಪಂದ್ಯ ರದ್ದು, ಟಿಕೆಟ್ ಹಣ ವಾಪಸ್

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಐಪಿಎಲ್‌ ಕ್ರಿಕೆಟ್ ಪಂದ್ಯಾವಳಿಯ ಆರ್ ಸಿಬಿ(ರಾಯಲ್ ಚಾಲೆಂಜರ್ಸ್ ಬೆಂಗಳೂರು) ಹಾಗೂ ಕೋಲ್ಕತ್ತಾ ನೈಟರ್ ರೈಡರ್ಸ್ ನಡುವಿನ ಪಂದ್ಯವು ಮಳೆಯಿಂದಾಗಿ ರದ್ದಾಗಿದೆ.

- Advertisement - 

ಮೇ17 ರಂದು ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ಹಾಗೂ ಕೆಕೆಆರ್ ತಂಡಗಳ ಮುಖಾಮುಖಿ ನಿಗದಿಯಾಗಿತ್ತು. ಆದರೆ ಮಳೆಯಿಂದಾಗಿ ಪಂದ್ಯ ರದ್ದುಗೊಂಡಿತ್ತು.

- Advertisement - 

ಆದರೆ ಪಂದ್ಯ ವೀಕ್ಷಣೆಗಾಗಿ ಟಿಕೆಟ್ ಖರೀದಿಸಿದ್ದವರಿಗೆ ಆರ್‌ಸಿಬಿ ಫ್ರಾಂಚೈಸಿ ಹಣ ವಾಪಸ್ ನೀಡಲು ತೀರ್ಮಾನಿಸಿದೆ.
ಮಳೆಯಿಂದ ಪಂದ್ಯ ರದ್ದಾದ ಬಳಿಕ ನಿರಾಸೆಗೊಂಡಿದ್ದ ಅಭಿಮಾನಿಗಳು ತಮ್ಮ ಟಿಕೆಟ್ ಹಣವನ್ನ ಕ್ಲೈಮ್ ಮಾಡಲು ಅವಕಾಶ ನೀಡಲಾಗಿದೆ.

ಟಿಕೆಟ್ ಹಣ ಪಡೆಯುವುದು ಹೇಗೆ?: ಮ್ಯಾನ್ಯುಯಲ್ ಟಿಕೆಟ್ ಖರೀದಿಸಿದ್ದವರು ತಮ್ಮ ಟಿಕೆಟ್‌ಗಳನ್ನು ಅಧಿಕೃತ ಮಾರಾಟಗಾರರಿಗೆ ಹಿಂದಿರುಗಿಸಿ ಹಣ ಪಡೆದುಕೊಳ್ಳಲು ಸೂಚಿಸಲಾಗಿದೆ.

- Advertisement - 

ಡಿಜಿಟಲ್ ಟಿಕೆಟ್ ಖರೀದಿಸಿದ್ದವರಿಗೆ ತಾವು ಹಣ ಪಾವತಿಸಲು ಬಳಸಿದ್ದ ಬ್ಯಾಂಕ್ ಖಾತೆಗೆ ಮುಂದಿನ 10 ದಿನಗಳಲ್ಲಿ ಹಣ ಸಂದಾಯವಾಗಲಿದೆ. ಆಕಸ್ಮಾತ್, ಮೇ.31 ರೊಳಗೆ ಹಣ ಸಂದಾಯವಾಗದಿದ್ದರೆ, ನಿಮ್ಮ ಟಿಕೆಟ್ ಬುಕ್ಕಿಂಗ್ ಮಾಹಿತಿಯನ್ನು refund@ticketgenie.inಗೆ ಮೇಲ್ ಮಾಡಬಹುದಾಗಿದೆ. ಆದರೆ ಕಾಂಪ್ಲಿಮೆಂಟರಿ ಟಿಕೆಟ್‌ಗಳಿಗೆ ಮರುಪಾವತಿ ಇಲ್ಲ ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಸ್ಪಷ್ಟಪಡಿಸಿದೆ.

 

Share This Article
error: Content is protected !!
";