ಮಹಿಳೆಯರಿಗೆ 4 ತಿಂಗಳಿಂದ ಗೃಹಲಕ್ಷ್ಮಿ ಹಣ ಕೊಡದ ಭ್ರಷ್ಟ ಸಿದ್ದರಾಮಯ್ಯ ಸರ್ಕಾರ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಅಧಿಕಾರದ ಏಣಿ ಹತ್ತಿದ ಬಳಿಕ ಕರ್ನಾಟಕ ಕಾಂಗ್ರೆಸ್ ಸರ್ಕಾರ ರಾಜ್ಯದ ಜನರನ್ನು ಮೂರ್ಖರನ್ನಾಗಿಸಿದೆ ಎಂದು ಜೆಡಿಎಸ್ ವಾಗ್ದಾಳಿ ಮಾಡಿದೆ.   

- Advertisement - 

ರಾಜ್ಯದ ಮಹಿಳೆಯರಿಗೆ 4 ತಿಂಗಳಿಂದ ಗೃಹಲಕ್ಷ್ಮಿ ಹಣ ಕೊಡಲು ಹೆಣಗಾಡುತ್ತಿರುವ ಭ್ರಷ್ಟ ಸಿದ್ದರಾಮಯ್ಯ ಸರ್ಕಾರ, ಕಾಂಗ್ರೆಸ್‌ ಕಾರ್ಯಕರ್ತರಿಗೆ ಮಾತ್ರ ತಿಂಗಳ ತಿಂಗಳ ಚಾಚು ತಪ್ಪದೇ ಭತ್ಯೆ ನೆಪದಲ್ಲಿ ಜೇಬು ತುಂಬಿಸುತ್ತಿದೆ.

- Advertisement - 

 ಪ್ರತಿ ತಿಂಗಳು ಗೃಹಲಕ್ಷ್ಮಿ ಹಣ ಕೊಡುತ್ತೇವೆ ಎಂದು ನಾವು ಹೇಳಿಲ್ಲ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಬಹಿರಂಗವಾಗಿಯೇ ಹೇಳಿದ್ದರು.

ಗ್ಯಾರಂಟಿ ಅನುಷ್ಠಾನ ಸಮಿತಿಯಲ್ಲಿರುವ ಕಾಂಗ್ರೆಸ್‌ ಕಾರ್ಯಕರ್ತರಿಗೆ ಏಪ್ರಿಲ್‌ʼನಿಂದ ಆಗಸ್ಟ್‌  ತಿಂಗಳ ವರೆಗೆ 7 ಕೋಟಿ 65 ಲಕ್ಷ ರೂ. ಭತ್ಯೆಯನ್ನು ಮುಂಗಡವಾಗಿ ಪಾವತಿಸಿದೆ.

- Advertisement - 

ಗ್ಯಾರಂಟಿ ಗ್ಯಾರಂಟಿ ಎಂದು ರಾಜ್ಯದ ಜನರ ಕೈಗೆ ಚಿಪ್ಪು ಕೊಟ್ಟು, ಕಾಂಗ್ರೆಸ್‌ ಕಾರ್ಯಕರ್ತರಿಗೆ ಕೈ ತುಂಬ ಸಂಬಳ (ಭತ್ಯೆ) ಕೊಡುವುದಕ್ಕೆ ನಿಮ್ಮ ಆತ್ಮಸಾಕ್ಷಿಯಾದರೂ ಹೇಗೆ ಒಪ್ಪುತ್ತದೆ ?

ವಚನ ಭ್ರಷ್ಟ ಸಿಎಂ, ಡಿಸಿಎಂ ಇದು ರಾಜ್ಯದ ಜನರಿಗೆ ಕಾಂಗ್ರೆಸ್‌ ಸರ್ಕಾರ ಮಾಡುತ್ತಿರುವ ಮಹಾದ್ರೋಹವಲ್ಲದೇ ಮತ್ತೇನು ? ಎಂದು ಜೆಡಿಎಸ್ ತೀಕ್ಷ್ಣವಾಗಿ ಪ್ರಶ್ನಿಸಿದೆ.

 

Share This Article
error: Content is protected !!
";