ಬಾಲ್ಯದಿಂದ ವೃದ್ಧಾಪ್ಯದವರೆಗೂ ಪೌಷ್ಟಿಕ ಆಹಾರ ಅವಶ್ಯಕ-ಸಣ್ಣ ರಂಗಮ್ಮ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಪ್ರತಿ ವ್ಯಕ್ತಿಗೆ ಬಾಲ್ಯದಿಂದ ವೃದ್ಧಾಪ್ಯದವರೆಗೂ ಪೌಷ್ಟಿಕ ಆಹಾರ ಅತ್ಯಂತ ಅವಶ್ಯಕ. ಅದರಲ್ಲಿಯೂ ಋತುಸ್ರಾವವಾಗುವ ಹುಡುಗಿಯರು
, ಗರ್ಭಿಣಿಯರು ಮತ್ತು ಬಾಣಂತಿಯರಿಗೆ ಹೆಚ್ಚಿನ ಪೋಷಕಾಂಶಗಳ ಅವಶ್ಯಕತೆ ಇರುತ್ತದೆ ಎಂದು ಪೌಷ್ಟಿಕ ಮೇಲ್ವಿಚಾರಕಿ ಸಣ್ಣ ರಂಗಮ್ಮ ತಿಳಿಸಿದರು.

ಇಲ್ಲಿನ ಮಾರುತಿ ನಗರದ ವ್ಯಾಪ್ತಿಯ ಅಂಗನವಾಡಿ ಕೇಂದ್ರದಲ್ಲಿ ಪೌಷ್ಟಿಕ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಮ್ಮ ದೇಹಕ್ಕೆ ಬೇಕಾಗುವಷ್ಟು ಆರೋಗ್ಯಕರ ಮತ್ತು ಪೌಷ್ಟಿಕ ಆಹಾರ ಹಾಗೂ ಅವುಗಳ ಸೇವನಯಿಂದ ನಮ್ಮ ಆರೋಗ್ಯಕ್ಕೆ ಲಭಿಸುವ ಲಾಭದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಅಗತ್ಯವಿದೆ ಎಂದು ತಿಳಿಸಿದರು.

- Advertisement - 

ಬಾಲ್ಯ ವಿವಾಹಗಳು ಸಮಾಜಕ್ಕೆ ಮಾರಕ, ಅಲ್ಲದೆ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ ಎಂದು ಸಣ್ಣ ರಂಗಮ್ಮ ಎಚ್ಚರಿಸಿದರು.

ತಾಯಂದಿರಗೆ, ಗರ್ಭಿಣಿಯರಿಗೆ, ಬಾಣಂತಿಯರಿಗೆ ಪೌಷ್ಟಿಕ ಆಹಾರ ಮತ್ತು ಲಸಿಕೆಗಳ ಅರಿವು ಮೂಡಿಸಿದರು.
ಡಾ.ಯಶಸ್ ಮಾತನಾಡಿ ಲಾರ್ವ ಉತ್ಪತ್ತಿ ತಾಣಗಳ ಬಗ್ಗೆ ಅರಿವು  ಮೂಡಿಸಲಾಯಿತು. ಕುಟುಂಬ ಕಲ್ಯಾಣ ವಿಧಾನಗಳ ಕುರಿತು ಮಹಿಳೆಯರಿಗೆ ತಿಳಿಸಲಾಯಿತು. ಇದಲ್ಲದೆ
PMSMA ಕಾರ್ಯಕ್ರಮ, ಗರ್ಭಿಣಿ ನೋಂದಣಿ ಮತ್ತು ತಾಯಿಕಾರ್ಡ್ ಕುರಿತು ಮಾಹಿತಿ ನೀಡಲಾಯಿತು. ಗರ್ಭಿಣಿಯರು ಹೆರಿಗೆಗೆ ಸರ್ಕಾರಿ ಆಸ್ಪತ್ರೆಗೆ ಹೋಗಬೇಕು. ಸರ್ಕಾರಿ ಆಸ್ಪತ್ರೆಯಲ್ಲಿ ಸಹಜ ಹೆರಿಗೆಗೆ ಒತ್ತು ನೀಡುವುದರಿಂದ ಮಹಿಳೆಯರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಮಾಹಿತಿ ನೀಡಲಾಯಿತು.

- Advertisement - 

ಎಲ್ಲಾ ರೀತಿಯ ಸಮತೋಲನ ಆಹಾರ ಸೇವನೆ ಮಾಡುವುದರಿಂದ ಪ್ರತಿಯೊಬ್ಬರು ಪೌಷ್ಟಿಕವಾಗಿರಬಹುದು ಎಂದು ತಿಳಿಸಲಾಯಿತು.
ORS ಕಾರ್ನರ್ ಬಗ್ಗೆ ತಿಳಿಸಲಾಯಿತು.
ಕಾರ್ಯಕ್ರಮದಲ್ಲಿ
PHCO, LHV ತಿಪ್ಪಮ್ಮ, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಇದ್ದರು.

 

 

Share This Article
error: Content is protected !!
";