ಲಂಚಕ್ಕೆ ಬೇಡಿಕೆ ಇಟ್ಟಿದ್ದ ವೈದ್ಯ ಶ್ರೀಕೃಷ್ಣ ವಿರುದ್ಧ ಎಫ್ಐಆರ್ ದಾಖಲಿಸಿದ ಲೋಕಾಯುಕ್ತರು

News Desk

ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹೊರಗುತ್ತಿಗೆಯ ನವೀಕರಣಕ್ಕಾಗಿ 5 ಸಾವಿರ ರೂ.ಗೆ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಜವನಗೊಂಡನಹಳ್ಳಿ ಪ್ರಾರ್ಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ.ಶ್ರೀಕೃಷ್ಣ ಇವರ ವಿರುದ್ಧ ಲೋಕಾಯುಕ್ತ ಕಚೇರಿಯಲ್ಲಿ ಎಫ್ಐಆರ್ ದಾಖಲಾಗಿದೆ.

ಹೊರಗುತ್ತಿಗೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ನರ್ಸ್ ಎಂ.ಲತಾ ಮೋಹನ್ ಕೃಷ್ಣ ಅವರು ನೀಡಿದ ದೂರು ಆಧರಿಸಿ ಲೋಕಾಯುಕ್ತ ಕಚೇರಿಯ ತನಿಖಾಧಿಕಾರಿ ಬಿ.ಮಂಜುನಾಥ್ ಅವರು ಎಫ್ಐಆರ್ ದಾಖಲು ಮಾಡಿಕೊಂಡಿದ್ದಾರೆ.

- Advertisement - 

ಅಲ್ಲದೆ ಹೊರಗುತ್ತಿಗೆ ನರ್ಸ್ ಲತಾ ಮತ್ತು ವೈದ್ಯ ಶ್ರೀಕೃಷ್ಣ ನಡುವೆ ನಡೆದ ಮೊಬೈಲ್ ಸಂಭಾಷಣೆಯುಳ್ಳ ಮೊಮರಿ ಕಾರ್ಡ್ ಅನ್ನು ಲೋಕಾಯುಕ್ತರು ದೂರುದಾರರಿಂದ ಪಡೆದಿದ್ದಾರೆ.

 

- Advertisement - 

Share This Article
error: Content is protected !!
";