ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ನಗರದ ಚಿತ್ರದುರ್ಗ ರಸ್ತೆಯ ವೀರದಿಮ್ಮನಹಳ್ಳಿ ರಾಷ್ಟ್ರೀಯ ಹೆದ್ದಾರಿ(೧೫೦ಎ) ಬೈಪಾಸ್ನಲ್ಲಿ ಮಂಗಳವಾರ ಮಧ್ಯಾಹ್ನ ಮೋಟಾರ್ ಬೈಕ್ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಬೈಕ್ನಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟು, ಕಾರು ಚಾಲಕ ಸಹ ಗಾಯಗೊಂಡು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ಧಾನೆ.
ತಾಲ್ಲೂಕಿನ ತಳಕು ಗ್ರಾಮದ ಗ್ರಾಮ ಪಂಚಾಯಿತಿ ಸದಸ್ಯ ಟಿ.ರವಿಚಂದ್ರರವರ ಪತ್ನಿ ಕೆ.ಮಂಜುಳಾ(೩೨), ಮಂಜುಳಾ ಸಹೋದರ ಅಭಿಷೇಕ್(೨೮) ಬೈಕ್ನಲ್ಲಿ ತಳುಕಿನಿಂದ ಹಿರಿಯೂರು ತಾಲೂಕಿನ ದೇವರಕೊಟ್ಟ ಗ್ರಾಮದ ಮೊರಾರ್ಜಿಶಾಲೆಗೆ ತೆರಳುತ್ತಿದ್ದು, ಮಂಜುಳಾ, ರವಿಚಂದ್ರರವರ ಪುತ್ರ ಆರ್ಯನ್ ದೇವರಕೊಟ್ಟದ ಮೊರಾರ್ಜಿ ಶಾಲೆಯಲ್ಲಿ ೬ನೇ ತರಗತಿ ಓದುತ್ತಿದ್ದು ಪುತ್ರನನ್ನು ನೋಡಲು ಮಂಜುಳಾ ಸಹೋದರ ಅಭಿಷೇಕ್ನೊಂದಿಗೆ ಬೈಕ್ನಲ್ಲಿ ಪ್ರಯಾಣಿಸುತ್ತಿದ್ದರು.
ಹಿರಿಯೂರು ಕಡೆಯಿಂದ ಬಳ್ಳಾರಿ ಕಡೆಗೆ ಹೋಗುತ್ತಿದ್ದ ಕಾರು ವಿರುದ್ದ ದಿಕ್ಕಿನಲ್ಲಿ ಆಗಮಿಸಿ ಮೋಟಾರ್ ಬೈಕ್ಗೆ ಅಪ್ಪಳಿಸಿದೆ. ಕಾರಿನ ಅತಿವೇಗ ಈ ಅಪಘಾತಕ್ಕೆ ಕಾರಣವಾಗಿದ್ದು ಅಪಘಾತದ ನಂತರ ಸುಮಾರು ೩೦ ಮೀಟರ್ ದೂರದಲ್ಲಿ ಬೈಕ್ ಬಿದಿದ್ದು, ಅಭಿಷೇಕ್ ಮತ್ತು ಮಂಜುಳಾರವರ ಶವಗಳು ಅಲ್ಲಲ್ಲಿ ಬಿದ್ದಿದ್ದವು. ಕಾರುಚಾಲಕ ರಾಯಚೂರು ಜಿಲ್ಲೆ ಸಂಕನಹಾಳ್ ಗ್ರಾಮದ ನಾಗರಡ್ಡೆಪ್ಪ(೩೫) ಬೈಕ್ಗೆ ಡಿಕ್ಕಿಪಡಿಸಿದ್ದು, ಅರೆಪ್ರಜ್ಞ ವ್ಯವಸ್ಥೆಯಲ್ಲಿ ಬಿದಿದ್ದ ನಾಗರಡೆಪ್ಪನನ್ನು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ಧಾರೆ.

ಡಿಕ್ಕಿ ರಂಭಸಕ್ಕೆ ಕಾರು ಹಾಗೂ ಬೈಕ್ ಎರಡು ಜಖಂಗೊಂಡಿವೆ. ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪಿಎಸ್ಐ ಈರೇಶ್ ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಿದ್ಧಾರೆ.

