ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಅಶ್ಲೀಲ ಕಮೆಂಟ್ ಹಾಕುತ್ತಿದ್ದ ದರ್ಶನ್ ಅಭಿಮಾನಿಗಳ ವಿರುದ್ಧ ತಾವು ನೀಡಿದ್ದ ದೂರಿನ ಬಗ್ಗೆ ಮಾಜಿ ಸಂಸದೆ, ನಟಿ ರಮ್ಯಾ ಮಾತನಾಡಿ, ಅದೊಂದು ಒಳ್ಳೆಯ ಹೆಜ್ಜೆ ಆಗಿತ್ತು. ಈಗ ಕಮೆಂಟ್ ಸೆಕ್ಷನ್ಗಳು ತುಸು ಕ್ಲೀನ್ ಆಗಿವೆ ಎಂದು ಹೇಳಿದರು.
ದೂರು ನೀಡಿದ ನಂತರ ಕೆಟ್ಟ ಕಮೆಂಟ್ಗಳು ಹೆಚ್ಚಾಗಿ ಬರುತ್ತಿಲ್ಲ, ಮಹಿಳೆಯರಿಗೆ ಇದರಿಂದ ಧೈರ್ಯ ಬಂದಿದೆ. ನಾನು ನೀಡಿರುವ ದೂರಿನ ಅನ್ವಯ ಪೊಲೀಸರು ತನಿಖೆ ನಡೆಸಿದ್ದು ಈ ವರೆಗೆ ಏಳು ಮಂದಿಯನ್ನು ಬಂಧಿಸಿದ್ದಾರೆ ಎಂದು ತಿಳಿಸಿದರು.
ಕೆಟ್ಟ ಕಮೆಂಟ್ ಹಾಕಿದ್ದ ಕೆಲವರಂತೂ ಮನೆ ಬಿಟ್ಟು ಪರಾರಿ ಆಗಿದ್ದಾರೆ. ಪೊಲೀಸರು ಅವರ ಹುಡುಕಾಟ ಮಾಡುತ್ತಿದ್ದಾರೆ ಎಂದು ರಮ್ಯಾ ತಿಳಿಸಿದರು.

