ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
1991ರ ಲೋಕಸಭಾ ಚುನಾವಣೆಯಲ್ಲೇ ಭಾರತೀಯ ಕಾಂಗ್ರೆಸ್ ಪಕ್ಷ “ಮತಗಳ್ಳತನ” ಮಾಡಿ ಜನತಾದಳದಿಂದ ಸ್ಪರ್ಧಿಸಿದ್ದ ಸಿದ್ದರಾಮಯ್ಯ ಅವರನ್ನು ಸೋಲಿಸಿ, ಕೊಪ್ಪಳದಲ್ಲಿ ಕಾಂಗ್ರೆಸ್ಅಭ್ಯರ್ಥಿ ಜಯಗಳಿಸಿದ್ದರು.
ಅಂದು ತಮಗಾದ ಅನ್ಯಾಯವನ್ನು ಸಾರ್ವಜನಿಕ ವೇದಿಕೆಯಲ್ಲೇ ಸಿದ್ದರಾಮಯ್ಯ ಸತ್ಯ ಬಹಿರಂಗ ಪಡಿಸಿದ್ದಾರೆ. ರಾಹುಲ್ ಗಾಂಧಿ ನೀವು ಮಾಡುತ್ತಿರುವ ಮತಗಳ್ಳತನ ಆರೋಪಕ್ಕೆ ಸ್ವತಃ ಮುಖ್ಯಮಂತ್ರಿಗಳೇ ಸ್ಪಷ್ಟವಾಗಿ ಉತ್ತರ ನೀಡಿದ್ದಾರೆ.
“ತಾನು ಕಳ್ಳ, ಪರರ ನಂಬ” ಎನ್ನುವಂತೆ ಚುನಾವಣಾ ಅಕ್ರಮ, ಮತಗಳ್ಳತನ ಭಾರತೀಯ ಕಾಂಗ್ರೆಸ್ ಪಕ್ಷದ DNA ಯಲ್ಲೇ ಅಡಗಿದೆ ಎಂದು ಜೆಡಿಎಸ್ ವಾಗ್ದಾಳಿ ಮಾಡಿದೆ.

