i
ಹುಳುಗಳಿರುವ ಬೇಳೆ ತಿಂದರೆ ಮಕ್ಕಳು ಸಾಯುವುದಿಲ್ಲ ಎಂದ ಶಾಲೆಯ ಮುಖ್ಯಶಿಕ್ಷಕಿ!
ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ :
ನಗರದ ಸೂಳೆಬೈಲ್ ಸರಕಾರಿ ಉರ್ದು ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಗುಣಮಟ್ಟವಿಲ್ಲದ ಆಹಾರ ನೀಡಲಾಗುತ್ತಿದೆ. ಜೊತೆಗೆ ಶಾಲೆಯಲ್ಲಿ ಶಿಸ್ತು ಇಲ್ಲ. ಮುಖ್ಯಾಧ್ಯಾಪಕಿ ಎಲ್ಲದಕ್ಕೂ ಧಿಮಾಕಿನ ಮಾತನ್ನಾಡುತ್ತಾರೆ. ಏನು ಬೇಕಾದರೂ ಮಾಡಿಕೊಳ್ಳಿ ಎನ್ನುತ್ತಾರೆ.
ಮಾಧ್ಯಮದವರು ಶಾಲೆಯಲ್ಲಿ ಹುಳುಗಳಿರುವ ಬೇಳೆ, ಶಿಸ್ತು ಇಲ್ಲದಿರುವ ಬಗ್ಗೆ ಮಾಹಿತಿ ಪಡೆದು ತೆರಳಿದಾಗ ಮುಖ್ಯ ಶಿಕ್ಷಕಿ ಶಿಕ್ಷಕಿ ಫಾತಿಮಾ ಬೇಗಂ ಹೇಳಿದ ಮಾತಿದು.
ಇದರಿಂದ ಶಾಲೆಯ ಎಸ್ ಡಿಎಂಸಿ ಸಮಿತಿಯವರು ಮಾಧ್ಯಮದವರ ಮುಂದೆ ತಮ್ಮ ಕಳವಳ ವ್ಯಕ್ತಪಡಿಸಿದ ಘಟನೆ ನಡೆಯಿತು.
ಬೆಳೆ ಕಾಳು ನಿಜವಾಗಿಯೂ ಕಳಪೆಯಾಗಿತ್ತು. ಅದರಲ್ಲಿ ಕೀಟಗಳು ಕಂಡುಬಂದಿವೆ ಮತ್ತು ಶಾಲೆಯ ಪರಿಸ್ಥಿತಿಯು ಹದಗೆಟ್ಟಿದೆ. ಶಾಲೆಯಲ್ಲಿ ಮಕ್ಕಳಿಗೆ ಗುಣಮಟ್ಟವಿಲ್ಲದ ಆಹಾರ ನೀಡಲಾಗುತ್ತಿದೆ, ಸ್ವಚ್ಛತೆಯ ಬಗ್ಗೆ ಕಾಳಜಿ ವಹಿಸುತ್ತಿಲ್ಲ ಎಂದು ಆರೋಪಿಸಿ ಶಾಲೆಯ ಶಿಕ್ಷಕಿ ಫಾತಿಮಾ ಬೇಗಂ ಅವರನ್ನು ಪ್ರಶ್ನಿಸಿದಾಗ ಅವರು ನಾನು ನಿವೃತ್ತಿ ಪಡೆಯುತ್ತಿದ್ದೇನೆ. ಇನ್ನು ಕೆಲವೇ ದಿನಗಳು ಉಳಿದಿವೆ, ನೀವು ಏನು ಮಾಡಬೇಕೋ ಅದನ್ನು ಮಾಡಿ ಎಂಬ ಮಾತನ್ನಾಡಿದರು.
ದಾಲ್ನಲ್ಲಿ ಹುಳುಗಳಿವೆ, ಇದು ಹಳೆ ಸ್ಟಾಕ್ ಆಗಿದೆ, ಏಪ್ರಿಲ್ನಲ್ಲಿ ಬಂದ ದಾಸ್ತಾನು ಅದೇ ದಾಸ್ತಾನು, ಅದು ಮುಗಿದ ನಂತರವೇ ಹೊಸ ದಾಸ್ತಾನು ಲಭ್ಯವಿರುತ್ತದೆ. ನನ್ನ ನಿವೃತ್ತಿ ಇನ್ನೂ ಕೆಲವು ದಿನಗಳು ಉಳಿದಿವೆ, ನಾನು ದಾಖಲೆಗಳನ್ನು ಸರಿಪಡಿಸುವಲ್ಲಿ ನಿರತನಾಗಿದ್ದೇನೆ. ಆದ್ದರಿಂದ ಈ ವಿಷಯಗಳ ಬಗ್ಗೆ ಗಮನ ಹರಿಸಲು ಬಯಸುವುದಿಲ್ಲ ಎಂದು ಹೇಳಿದರು.
ಎಸ್ ಡಿಎಂಸಿ ಅಧ್ಯಕ್ಷ ನವಾಝ್ ಮಾತನಾಡಿ, ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಉತ್ತಮವಾಗಿದೆ, ಆದರೆ ಇಲ್ಲಿನ ಶಿಕ್ಷಕರ ಸಹಕಾರ ಇಲ್ಲ, ಶಿಕ್ಷಕರು ಪ್ರತಿ ವಾರ ರಜೆಯಲ್ಲಿರುವುದರಿಂದ ವಿದ್ಯಾರ್ಥಿಗಳ ಶಿಕ್ಷಣ ಸರಿಯಾಗಿ ನಡೆಯುತ್ತಿಲ್ಲ. . ಸರಕಾರದಿಂದ ಹಣ ನೀಡುವ ಹಣ ಸ್ವಚ್ಛತೆಗೆ ಬಳಸಿಕೊಳ್ಳಲಾಗುತಿಲ್ಲ. ಮಕ್ಕಳನ್ನು ಬಲವಂತವಾಗಿ ಶಾಲೆಯ ಕೆಲಸ ಮಾಡಿಸುತಿದ್ದಾರೆ. ವಿದ್ಯಾರ್ಥಿಗಳನ್ನು ನೆಲದ ಮೇಲೆ ಕೂಡ್ರಿಸುತ್ತಾರೆ. ಈ ಬಗ್ಗೆ ಬಿಇಒ ಹಾಗೂ ಡಿಡಿಪಿಐಗೆ ದೂರು ನೀಡಿದರೂ ಕ್ರಮ ಕೈಗೊಂಡಿಲ್ಲ. ಈಗ ಮುಖ್ಯೋಪಾಧ್ಯಾಯರು ನಿವೃತ್ತಿಯಾಗುವ ಮುನ್ನವೇ ಶಾಲೆಯನ್ನು ಹಾಳು ಮಾಡಲು ಮುಂದಾಗಿದ್ದಾರೆ. ಶಾಲೆಯ ಅಭಿವೃದ್ಧಿ ಹಾಗೂ ಉಳಿವಿಗೆ ಶಿಕ್ಷಣ ಸಚಿವರು ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.