![](https://www.chandravallinews.com/wp-content/uploads/2024/06/WhatsApp-Image-2024-06-29-at-4.55.12-AM-1-1024x436.jpeg)
i
ಕೋಟೆನಗರಿಯಲ್ಲಿ ನೂತನ ಆಯುರ್ವೇದ ವನಕ್ಕೆ ಎಡಿಸಿ ಚಾಲನೆ: ಎಡಿಸಿ ಕುಮಾರಸ್ವಾಮಿ
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಪ್ರಕೃತಿಯ ಮಡಿಲಲ್ಲಿ ಗಾಳಿ, ನೀರು, ಭೂಮಿ, ಆಕಾಶದ ಸಂಬಂಧದೊಂದಿಗೆ ನಾವು ಬದುಕುತ್ತಿದ್ಧೇವೆ ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಪ್ರಕೃತಿಯನ್ನು ಪ್ರೀತಿಸಿ, ಗೌರವಿಸಿ ಸಂರಕ್ಷಿಸಬೇಕು ಜೊತೆಗೆ ಆಯುರ್ವೇದ ವನ ನಿರ್ಮಾಣ ಮಾಡುತ್ತಿರುವುದು ಅತ್ಯಂತ ಶ್ಲಾಘನೀಯ ಮತ್ತು ಆರೋಗ್ಯಪೂರ್ಣ ಶ್ರೇಷ್ಠವಾದ ಕೆಲಸ ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ ಹೇಳಿದರು.
ಅವರು ನಗರಸಭೆ ಚಿತ್ರದುರ್ಗ, ಅರಣ್ಯ ಇಲಾಖೆ, ಋಷಿಸಂಸ್ಕೃತಿ ಗುರುಕುಲ ಮಹಾಸಂಸ್ಥಾನ, ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ, ಶ್ರೀವಿದ್ಯಾಗಣಪತಿ ಸೇವಾ ಸಮಿತಿಸಿದ್ದಾರ್ಥ ಬಡಾವಣೆ, ಅಮೃತ ಆಯುರ್ವೇದ ಕಾಲೇಜು ಆಶ್ರಯದಲ್ಲಿ ಜೂನ್ ೨೮ ರ ಶುಕ್ರವಾರ ಸಿದ್ದಾರ್ಥ ಬಡಾವಣೆ ಪಾರ್ಕ್ನಲ್ಲಿ ಹಮ್ಮಿಕೊಳ್ಳಲಾಗಿದ್ದ ಪರಿಸರ ದಿನಾಚರಣೆ ಅಂಗವಾಗಿ ಆಯುರ್ವೇದ ವನಕ್ಕೆ ಗಿಡ ನೆಡುವ ಮೂಲಕ ಚಾಲನೆ ನೀಡಿ ಮತ್ತು ಧನ್ವಂತರಿ ದೇವತೆಗೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.
ಕೋವಿಡ್ ಬಂದ ಭೀಕರ ಸಂದರ್ಭದಲ್ಲಿ ಜನರಿಗೆ ನಿಜವಾಗಿಯೂ ಆಕ್ಸಿಜನ್ ಬೆಲೆ ಗೊತ್ತಾಗಿದ್ದು, ಅಲ್ಲಿವರೆಗೂ ಆಕ್ಸಿಜನ್ ಎಂದರೆ ಗಾಳಿ ಎಂದಷ್ಟೇ ತಿಳಿಸಿದ್ದೆವು, ಹಿಂದೆ ನಮ್ಮ ಪೂರ್ವಿಕರು ಒಂದು ಮರ ಕಡಿದರೆ ಮತ್ತೊಂದನ್ನು ನೆಡುತ್ತಿದ್ದರು. ಇದನ್ನು ನಾವೆಲ್ಲರೂ ಮಾಡಬೇಕು. ಸರ್ಕಾರ ಕಾಡು ಬೆಳೆಸಲು ಎಲ್ಲಾ ಪ್ರಯತ್ನ ಮಾಡುತ್ತದೆ. ಯಾರೇ ಆಗಲಿ ಪರಿಸರ ಉಳಿಸುವ ಒಳ್ಳೆಯ ಕೆಲಸ ಮಾಡಿದರೆ ಅದಕ್ಕೆ ಬೆಂಬಲ ನೀಡಬೇಕು ಎಂದರು.
ಕಾಡು ಬೆಳೆದರೆ ನಾಡು ಬೆಳೆಯುತ್ತದೆ ಜೊತೆಗೆ ಪ್ರತಿಗಿಡಗಳು ಕೂಡ ಆಯುರ್ವೇದ ಗುಣಗಳನ್ನು ಹೊಂದಿರುತ್ತವೆ ಚಿತ್ರದುರ್ಗ ಎಂಬ ಮಧ್ಯ ಕರ್ನಾಟಕದಲ್ಲಿ ಆಯುರ್ವೇದ ವನ ನಿರ್ಮಾಣ ಮಾಡುವ ಮಹತ್ವದ ಸಂಕಲ್ಪ ಮತ್ತು ಗುರಿ ಹೊಂದಿರುವುದು ಮತ್ತು ಆಯುರ್ವೇದ ಶಿಕ್ಷಣ ಕಲಿಯುವ ವಿದ್ಯಾರ್ಥಿಗಳಿಗೆ ಇದೊಂದು ಉಪಯುಕ್ತ ಸಸ್ಯಕ್ಷೇತ್ರವಾಗಲಿ ಋಷಿಸಂಸ್ಕೃತಿ ಗುರುಕುಲ ಮಹಾಸಂಸ್ಥಾನದ ನೇತೃತ್ವದಲ್ಲಿ ಆಯುರ್ವೇದ ವನ ನಿರ್ಮಾಣ ಮಾಡುತ್ತಿರುವುದು ಅತ್ಯಂತ ಶ್ಲಾಘನೀಯ ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರಾದ ಸೌಭಾಗ್ಯ ಬಸವರಾಜನ್ ಮಾತನಾಡಿ, ಚಿತ್ರದುರ್ಗ ನಗರದಲ್ಲಿ ಅದೆಷ್ಟೋ ಪಾರ್ಕ್ಗಳಿವೆ ಆದರೆ ಉಪಯುಕ್ತವಾಗುವುದು ಮುಖ್ಯ, ಪ್ರಸ್ತುತ ಆರೋಗ್ಯ ಬಹಳ ಮುಖ್ಯ, ಕೇವಲ ಜೂನ್ ತಿಂಗಳಲ್ಲಿ ಪರಿಸರ ದಿನಾಚರಣೆ ಮಾಡುವ ಬದಲು ಹೀಗೆ ಉದ್ಯಾನವನ್ನು ಆಯುರ್ವೇದ ಕ್ಷೇತ್ರವನ್ನಾಗಿ ಮಾಡುವುದು ಮುಖ್ಯ. ಅರಣ್ಯ ಇಲಾಖೆ ಮತ್ತು ಆಯುಷ್ ಹಾಗೂ ಎಲ್ಲರ ಸಹಕಾರದೊಂದಿಗೆ ಎಲ್ಲಾ ಬಗೆಯ ಆಯುರ್ವೇ ಗಿಡಗಳನ್ನು ಬೆಳೆಸಿ ಎಂದರು.
ಸರ್ಕಾರ ಈ ವರ್ಷ ೫ ಕೋಟಿ ಗಿಡಗಳನ್ನು ಬೆಳೆಸಲು ಸರ್ಕಾರ ತೀರ್ಮಾನಿಸಿರುವುದು ಮಹತ್ವದ ಕಾರ್ಯ ಆದರೆ ಸರ್ಕಾರದೊಂದಿಗೆ ಸಾರ್ವಜನಿಕರೂ ಕೈ ಜೋಡಿಸಿದಾಗ ಮಾತ್ರ ಯೋಜನೆಗಳು ಯಶಸ್ವಿಯಾಗುತ್ತದೆ ಈ ಹಿನ್ನೆಲೆಯಲ್ಲಿ ನಿಮ್ಮ ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ಮತ್ತು ಋಷಿಸಂಸ್ಕೃತಿ ಗುರುಕುಲ ಮಹಾಸಂಸ್ಥಾನದಿAದ ಜಿಲ್ಲಾಧ್ಯಂತ ಹಸಿರು ಬೆಳೆಸಲು ಎಲ್ಲಾ ಪ್ರಯತ್ನ ಮಾಡಿ ಎಂದು ಸಲಹೆನೀಡಿದರು.
ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ರಾಜಣ್ಣ, ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ರಾಜ್ಯ ಉಪಾಧ್ಯಕ್ಷರಾದ ಡಾ. ಎಂ.ಸಿ ನರಹರಿ ಋಷಿಸಂಸ್ಕೃತಿ ಗುರುಕುಲ ಮಹಾಸಂಸ್ಥಾನದ ಆಡಳಿತಾಧಿಕಾರಿ ಮಾಲತೇಶ್ ಅರಸ್, ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ. ರಾಜ್ಯ ಸಂಚಾಲಕರಾದ ಟಿ. ರುದ್ರಮುನಿ ಮಾತನಾಡಿದರು. ನಗರಸಭೆ ಸದಸ್ಯರಾದ ಜಯಣ್ಣ ಅಧ್ಯಕ್ಷತೆಯನ್ನು ವಹಿಸಲಿದ್ದರು. ಸಿದ್ದಾರ್ಥ ಬಡಾವಣೆಯ ಶ್ರೀ ವಿದ್ಯಾಗಣಪತಿ ಸೇವಾ ಸಮಿತಿ ಅಧ್ಯಕ್ಷರಾದ ದುರ್ಗೇಶ್, ಸಿದ್ದಾರ್ಥ ಬಡಾವಣೆ ಕ್ಷೇಮಾಭಿವೃದ್ಧಿ ಸಂಘ ಸಂಚಾಲಕರಾದ ನಿವೃತ್ತ ಪೊಲೀಸ್ ಅಧಿಕಾರಿ ಬಸವರಾಜ್, ಅಮೃತ ಆಯುರ್ವೇದ ಕಾಲೇಜಿನ ಉಪನ್ಯಾಸಕ ಡಾ.ನವೀನ್ ಸಜ್ಜನ್, ನಗರಸಭೆ ಪರಿಸರ ಇಂಜಿನಿಯರ್ ನಾಗರಾಜ್, ಅರಣ್ಯ ಅಧಿಕಾರಿ ಉಷಾರಾಣಿ ಹಾಗೂ ಅಮೃತ ಆಯುರ್ವೇದ ಕಾಲೇಜಿನ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಸರ್ಕಾರದೊಂದಿಗೆ ‘ಗುರುಕುಲ” ಸದಾ ಸಿದ್ದ..
ಪರಿಸರಕ್ಕಾಗಿ ಋಷಿಸಂಸ್ಕೃತಿ ಗುರುಕುಲ ಮಹಾಸಂಸ್ಥಾನದ ಯುವ ಮತ್ತು ವಿದ್ಯಾರ್ಥಿಗಳ ತಂಡ ಸದಾ ಸಿದ್ದವಾಗಿದೆ. ಕಾಡು ಉಳಿದರೆ ನಾಡುಉಳಿದಂತೆ. ಆದ್ದರಿಂದ ಗಿಡಮರಗಳನ್ನು ಬೆಳೆಸುವುದರಿಂದ ಅಂತರ್ಜಲದ ಮಟ್ಟವನ್ನು ಹೆಚ್ಚಿಸಬಹುದು. ಇದರಿಂದ ಮಳೆಯಾಗುತ್ತದೆ. ಪರಿಸರ ಸಂರಕ್ಷಣೆ ಜೊತೆ ಆಯುರ್ವೇದ ಉಳಿವು ನಮ್ಮ ಗುರಿ, ಪ್ರತಿಯೊಬ್ಬರೂ ಗಿಡನೆಡುವ ಕಾರ್ಯಕ್ಕೆ ಋಷಿಸಂಸ್ಕೃತಿ ಗುರುಕುಲ ಮಹಾಸಂಸ್ಥಾನದ ಗ್ರೀನ್ ಕರ್ನಾಟಕ ತಂಡ ಸನ್ನದ್ದವಾಗಿದೆ. ಸರ್ಕಾರದ ಎಲ್ಲಾ ಅಧಿಕಾರಿಗಳು ನಮಗೆ ಕೈ ಜೋಡಿಸಲಿ ಎಂದು ಋಷಿಸಂಸ್ಕೃತಿ ಗುರುಕುಲ ಮಹಾಸಂಸ್ಥಾನದ ಮನವಿ ಮಾಡಿದೆ. ಗ್ರೀನ್ ಕರ್ನಾಟಕ ಟೀಮ್ ಸೇರಲು ಮೇಲ್ ಮಾಡಿ ಡಿushiguಡಿuಞuಟಚಿ@gmಚಿiಟ.ಛಿom ಆಸಕ್ತರು ಸಂಪರ್ಕಿಸಿ.. ೮೦೭೩೭೪೪೨೪೪.