![](https://www.chandravallinews.com/wp-content/uploads/2024/06/WhatsApp-Image-2024-06-30-at-6.56.58-AM-1024x509.jpeg)
i
ನಿಗಮದ ಅಧ್ಯಕ್ಷ ಮಂಜುನಾಥ್ ಅವರ ರಾಜಕೀಯದ ಪ್ರಾಬಲ್ಯಕ್ಕೆ ಹೊಸ ಮೆರುಗು
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಜಿ ಎಸ್ ಮಂಜುನಾಥ್ ರವರು ಆದಿಜಾಂಬವ ಅಭಿವೃದ್ಧಿ ನಿಗಮಕ್ಕೆ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರಕ್ಕೆ ಜನತೆಯ ಉತ್ಸಾಹದ ಬೆಂಬಲ ರಾಜಕೀಯ ಧೃವೀಕರಣದ ಮುನ್ನೋಟಕ್ಕೆ ಸಾಕ್ಷಿಯಾಯಿತು. ಅಧಿಕಾರ ಸ್ವೀಕಾರ ಹಾಗೂ ಕಚೇರಿಯ ಪೂಜಾ ಕಾರ್ಯಕ್ರಮಕ್ಕೆ ಅಧ್ಯರ ಸ್ವಾಗತದ ಮನವಿಗೆ ರಾಜ್ಯದಾದ್ಯಂತದ ಸಮಾಜದ ಮುಖಂಡರು, ಸ್ನೇಹಿತರು, ಅಭಿಮಾನಿಗಳು ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸ್ವಾಗತ ಕೋರಿದರು. ಅಲ್ಲದೆ ಬೆಂಬಲದ ಉತ್ಸಾಹ ಮಂಜುನಾಥ್ ಅವರ ರಾಜಕೀಯದ ಪ್ರಾಬಲ್ಯಕ್ಕೆ ಹೊಸ ಮೆರಗು ನೀಡುತ್ತದೆ.ಪೂಜಾ ಸಮಾರಂಭಕ್ಕೆ ಚಿತ್ರದುರ್ಗದ ಜಿಲ್ಲಾ ಉಸ್ತುವಾರಿ ಸಚಿವ ಡಿ ಸುಧಾಕರ್, ಶಾಸಕರುಗಳಾದ ರಘುಮೂರ್ತಿ, ಗೋವಿಂದಪ್ಪ, ಮಾಜಿ ಸಚಿವ ಎಚ್ ಆಂಜನೇಯ, ಮಾಜಿ ಸಂಸದ ಬಿ ಎನ್ ಚಂದ್ರಪ್ಪ ಸೇರಿದಂತೆ ಕಾಂಗ್ರೆಸ್ ಪಕ್ಷದ ಮುಖಂಡರು ಕಾರ್ಯಕರ್ತರು ಹಾಗೂ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದು ರಾಜಕೀಯ ಭವಿಷ್ಯಕ್ಕೆ ಉತ್ತಮ ಸಂದೇಶ ರವಾನೆ ಮಾಡಿದರು ಎಂದು ಕಾಂಗ್ರೆಸ್ ಮುಖಂಡ ರಘುಗೌಡ ತಿಳಿಸಿದ್ದಾರೆ.
ಇಂಜಿನಿಯರ್ ಸುಧಾಕರ್, ಮೈಲಾರಪ್ಪ, ರಮೇಶ್ ಕೋಟಿ ಭಾಗವಹಿಸಿ ಮಂಜುನಾಥ್ ರವರ ನಾಯಕತ್ವದ ಆಡಳಿತಕ್ಕೆ ಶುಭಕೋರಿದರು.