![](https://www.chandravallinews.com/wp-content/uploads/2024/06/WhatsApp-Image-2024-06-30-at-10.41.15-PM-2-1024x454.jpeg)
i
ತಿಮ್ಮಪ್ಪ ದೇವಸ್ಥಾನಕ್ಕೆ ಪಂಚಲೋಹ ವಿಗ್ರಹಗಳ ಕೊಡುಗೆ.
ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ನಗರದ ಪಾವಗಡ ರಸ್ತೆಯ ಜಗಜೀವನರಾಂ ಕಾಲೋನಿಯಲ್ಲಿರುವ ಪುರಾತನ ತಿಮ್ಮಪ್ಪಸ್ವಾಮಿ ದೇವಸ್ಥಾನದಲ್ಲಿ ನೂತನವಾಗಿ ಪಂಚಲೋಹದಿಂದ ಸಿದ್ದಪಡಿಸಿದ ವೆಂಕಟೇಶ್ವರ, ಲಕ್ಷ್ಮಿ, ಪದ್ಮಾವತಿಯ ವಿಗ್ರಹಗಳ ಭವ್ಯವಾದ ಮೆರವಣಿಗೆಯನ್ನು ದೇವಸ್ಥಾನದ ಆಡಳಿತ ಮಂಡಳಿ, ಸದ್ಭಕ್ತರು ಭಾನುವಾರ ನಡೆಸಿದರು.
ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಟಿ.ಮಾರಣ್ಣ ನೇತೃತ್ವದಲ್ಲಿ ನಗರದ ವಿವಿಧ ಪ್ರಮುಖ ರಸ್ತೆಯಲ್ಲಿ ಪಂಚಲೋಹದ ವಿಗ್ರಹಗಳ ಮೆರವಣಿಗೆ ಮಂಗಳವಾದ್ಯಗಳೊಂದಿಗೆ ನಡೆಯಿತು. ಶೀಘ್ರದಲ್ಲೇ ಮೂರು ಪಂಚಲೋಹದ ದೇವರ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಲಾಗುವುದು ಎಂದು ಅವರು ತಿಳಿಸಿದರು.
ಕಾರ್ಯದರ್ಶಿ ಟಿ.ಜಯಣ್ಣ ಮಾಹಿತಿ ನೀಡಿ, ಸುಮಾರು ೨.೯೦ ಲಕ್ಷ ಮೌಲ್ಯದ ಪಂಚಲೋಹ ವಿಗ್ರಹವನ್ನು ತಿರುಪತಿ ತಿರುಮಲ ಟ್ರಸ್ಟ್ವತಿಯಿಂದ ನೀಡಲಾಗಿದ್ದು ಇದರಲ್ಲಿ ದೇವಸ್ಥಾನ ಆಡಳಿತ ವಿಶೇಷವಾಗಿ ಪುರಾತನ ಹಾಗೂ ಪರಿಶಿಷ್ಟ ಜಾತಿ, ವರ್ಗದ ಸಮಿತಿ ಇದ್ದಲ್ಲಿ ಶೇ.೨೫ರಷ್ಟು ದೇವಸ್ಥಾನ ಆಡಳಿತ ಮಂಡಳಿ ಭರಿಸಬೇಕು, ಉಳಿದ ಹಣವನ್ನು ಟ್ರಸ್ಟ್ವತಿಯಿಂದ ನೀಡಲಾಗುತ್ತದೆ. ದೇವಸ್ಥಾನದ ಆಡಳಿತ ಮಂಡಳಿಯಿಂದ ಅವರಿಗೆ ೬೫ ಸಾವಿರ ಚೆಕ್ ನೀಡಿದ್ದು ಉಳಿದ ೨.೨೫ ಲಕ್ಷ ಹಣವನ್ನು ಟಿಡಿಡಿ ಟ್ರಸ್ಟ್ ನೀಡಿದ್ದು, ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಭಕ್ತರ ಪರವಾಗಿ ಟಿಡಿಡಿ ಟ್ರಸ್ಟ್ನ ಅಧ್ಯಕ್ಷರು ಹಾಗೂ ಎಲ್ಲಾ ಪದಾಧಿಕಾರಿಗಳನ್ನು ಅಭಿನಂದಿಸುವುದಾಗಿ ತಿಳಿಸಿದರು. ಮೆರವಣಿಗೆಯಲ್ಲಿ ಟ್ರಸ್ಟ್ ಉಪಾಧ್ಯಕ್ಷ ಜಯಣ್ಣ, ಖಜಾಂಚಿ ತಿಮ್ಮಣ್ಣ, ತಿರುಮಲರಾಯಪ್ಪ, ಪೂಜಾರಿತಿಮ್ಮಯ್ಯ, ವೀರಭದ್ರಪ್ಪ, ಡಿ.ಟಿ.ವೆಂಕಟೇಶ್ ಮುಂತಾದವರು ಉಪಸ್ಥಿತರಿದ್ದರು.