i
ಬಿಜೆಪಿ ಸೇರುವಂತೆ ಕರೆ ಬಂದಿದೆ: ಮಾಜಿ ಸಚಿವ ಈಶ್ವರಪ್ಪ..
ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ :
ಬಿಜೆಪಿ ಸೇರುವಂತೆ ಕರೆ ತನಗೆ ಬಂದಿದೆ. ಆದರೆ ಮಾತುಕತೆ ನಡೆಯಬೇಕಿದೆ ಎಂದು ಮಾಜಿ ಉಪಮುಖ್ಯಮಮತ್ರಿ ಕೆ ಎಸ್ ಈಶ್ವರಪ್ಪ ತಿಳಿಸಿದರು.
ಪತ್ರಿಕಾಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಸೇರ್ಪಡೆಯನ್ನು ಖಚಿತಪಡಿಸಿದರಾದರೂ ಯಾವಾಗ ಸೇರ್ಪಡೆ ಎನ್ನುವುದನ್ನು ಬಹಿರಂಗಪಡಿಸಲಿಲ್ಲ. ವ್ಯಕ್ತಿಗಿಂತ ಪಕ್ಷ ಮುಖ್ಯ. ಪಕ್ಷದಿಂದ ಕರೆ ಬಂದಿದೆ. ಮತ್ತೆ ಮಾತನಾಡುತ್ತೇನೆ ಎಂದರು.
ಜು.೧೫ ರ ಒಳಗೆ ಶಿವಮೊಗ್ಗ ಮಹಾನಗರ ಪಾಲಿಕೆಯ ಚುನಾವಣೆ ಘೋಷಿಸಬೇಕು. ಇಲ್ಲವಾದಲ್ಲಿ ಹೋರಾಟ ಅನಿವಾರ್ಯ. ಒಂದು ವರ್ಷದಿಂದ ಪಾಲಿಕೆಯಲ್ಲಿ ಜನಪ್ರತಿನಿಧಿಗಳಿಲ್ಲ. ಪ್ರಜಾಪ್ರಭುತ್ವದಲ್ಲಿ ಈ ರೀತಿ ವ್ಯವಸ್ಥೆ ಆಡಳಿತಕ್ಕೆ ಕಪ್ಪು ಚುಕ್ಕೆಯಾಗಿದೆ. ತತಕ್ಷಣ ಚುನಾವಣೆ ನಡೆಸಬೇಕು. ಚುನಾಯಿತರಿಲ್ಲದೆ ಆಡಳಿತ ವ್ಯವಸ್ಥೆ ನಿರ್ವಹಣೆ ಕಷ್ಟವಾಗಿದೆ. ಪಾಲಿಕೆಗೆ ಹೊಸ ಜನಪ್ರತಿನಿಧಿಗಳು ಬಂದರೆ ಅಭಿವೃದ್ಧಿ ಕೆಲಸಕ್ಕೂ ಅನುಕೂಲ, ಜನಸ್ಪಂದನೆಗೂ ಅವಶ್ಯ ಎಂದರು.
ಗೋವಿಂದಾಪುರ ಆಶ್ರಯ ಬಡಾವಣೆಯಲ್ಲಿ ೩ ಸಾವಿರ ಮನೆ ನಿರ್ಮಿಸಿದರೂ ಮೂಲಸೌಕರ್ಯವನ್ನು ಪೂರ್ಣವಾಗಿ ಕಲ್ಪಿಸಿಲ್ಲ. ರಸ್ತೆ, ಲೈಟ್ ವ್ಯವಸ್ಥೆ ಇತ್ತು. ಈಗ ಅದೆಲ್ಲ ಹಾಳಾಗಿದೆ. ಎಲ್ಲ ಮನೆಗಳನ್ನೂ ಬಡವರಿಗೆ ಹಂಚಬೇಕು. ಸೂಕ್ತ ವ್ಯವಸ್ಥೆ ಕಲ್ಪಿಸಬೇಕೆಂದು ವಸತಿ ಸಚಿವ ಜಮೀರ್ ಅಹಮದ್ ಅವರನ್ನು ಭೇಟಿ ಮಾಡಿ ಕೋರಲಾಗಿತ್ತು. ಆಗ ತಾನೇ ಶಿವಮೊಗ್ಗಕ್ಕೆ ಬರುವುದಾಗಿ ಹೇಳಿದ್ದರು. ಆದರೆ ಬಾರದೆ ಸರ್ಕಾರ ಬಡವರ ಆಶ್ರಯವನ್ನು ನಿರ್ಲಕ್ಷಿಸಿದೆ. ಗೋವಿಂದಾಪುರ ಆಶ್ರಯ ಬಡಾವಣೆಯ ಕಟ್ಟಡ ಕಾಮಗಾರಿಗೆ ಹೆಚ್ಚಿನ ವೇಗ ತುಂಬಿಸುವAತೆ ಕೋರಿದರು.
ಕೆಪಿಟಿಸಿಎಲ್, ಆಶ್ರಯ ಸಮಿತಿ ಅಧ್ಯಕ್ಷರ ನೇತೃತ್ವದಲ್ಲಿ ಸಭೆ ನಡೆಸಲಾಗುವುದು. ಸರ್ಕಾರ ಸಭೆ ನಡೆಸಲು ಆಸಕ್ತಿ ತೋರುತ್ತಿಲ್ಲ. ಇದು ಮುಂದುವರೆದರೆ ಹೋರಾಟ ಅನಿವಾರ್ಯ ಎಂದರು.
ಡಿಡಿಸಿ ಬ್ಯಾಂಕ್ ಚುನಾವಣೆಗೆ ಸ್ಪರ್ಧಿಸಿ ಗೆದ್ದ ರಾಷ್ಟçಭಕ್ತರ ಬಳದ ಸದಸ್ಯ ಮಹಾಲಿಂಗಯ್ಯ ಶಾಸ್ತಿç ಅವರಿಗೆ ಜುಲೈ ೧೫ ರಂದು ಅಭಿನಂದನಾ ಸಮಾರಂಭವನ್ನು ಇಟ್ಟುಕೊಳ್ಳಲಾಗಿದೆ ಎಂದರು.
ನಗರಸಭೆ ಮಾಜಿ ಅಧ್ಯಕ್ಷ ಎಂ. ಶಂಕರ್, ಶಂಕರ್ ಗನ್ನಿ, ವಿಶ್ವಾಸ್, ಮಹಾಲಿಂಗಯ್ಯ ಶಾಸ್ತಿç, ಎಂ ಜಿ ಬಾಲು, ಅ ಮ ಪ್ರಕಾಶ್ ಹಾಜರಿದ್ದರು.