![](https://www.chandravallinews.com/wp-content/uploads/2024/07/WhatsApp-Image-2024-07-01-at-9.05.09-PM-1024x456.jpeg)
i
ನಿವೃತ್ತ ಪೊಲೀಸರಿಗೆ ಬೀಳ್ಕೊಡುಗೆ
ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ :
ಜೂನ್ 30 ರಂದು ನಿವೃತ್ತರಾದ ನಾಲ್ವರು ಪೊಲೀಸರಿಗೆೆ ಪೊಲೀಸ್ ವರಿಷ್ಠರÀ ಕಚೇರಿಯಲ್ಲಿ ಎಸ್ ಪಿ ಜಿ ಕೆ ಮಿಥುನ್ಕುಮಾರ್ ಬೀಳ್ಕೊಡುಗೆ ನೀಡಿ ಗೌರವಿಸಿದರು.
ನಿವೃತ್ತರಾದವರೆಂದರೆ- ಡಿಎಆರ್ ಎಆರ್ಎಸ್ಐ ಬಿ ಆರ್ ಮಹದೇವ, ವಿನೋಬನಗರ ಠಾಣೆಯ ಎಎಸ್ ಐ ಟಿ ಎಸ್ ವೀರೇಶಪ್ಪ, ತೀರ್ಥಹಳ್ಳಿ ಎಎಸ್ ಐ ಯುಸೂಫ್ ಮತ್ತು ಡಿಎಆರ್ನ ಎಪಿಸಿ ಜಗದೀಶ್ ಹೆಚ್. ಬಿ. ನೆನಪಿನ ಕಾಣಿಕೆಯನ್ನು ನೀಡಿ ಸನ್ಮಾನಿಸಿ ಮುಂದಿನ ನಿವೃತ್ತಿ ಜೀವನವು ಸುಖಕರವಾಗಿರಲಿ ಎಂದು ಎಸ್ ಪಿ ಶುಭ ಕೋರಿ ಬೀಳ್ಕೊಡುಗೆ ನೀಡಿದರು.
ಈ ಸಂದರ್ಭದಲ್ಲಿ ಎಸ್ ಪಿ ಕಚೇರಿಯ ಸಹಾಯಕ ಆಡಳಿತಾಧಿಕಾರಿ ಸತೀಶ್, ಶಾಖಾಧೀಕ್ಷಕ ಮಾಳಗಿ ಉಪಸ್ಥಿತರಿದ್ದರು.