ದೇವಾಂಗ ಮಂಡಲಿ ಅಧ್ಯಕ್ಷರಾಗಿ ನಗರಸಭಾ ಸದಸ್ಯ ಶ್ರೀನಿವಾಸ್ ಪುನರಾಯ್ಕೆ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ದೊದ್ದಬಳ್ಳಾಪುರ:
ತೀವ್ರ ಕುತೂಹಲ ಕೆರಳಿಸಿದ್ದ ದೇವಾಂಗ ಸಮುದಾಯದ ಶಕ್ತಿ ಕೇಂದ್ರ ದೇವಾಂಗ ಮಂಡಳಿಯ
2025..2028ರ ಸಾಲಿಗೆ ಚುನಾವಣೆ ನಡೆದಿದ್ದು, ಚುನಾವಣೆಯಲ್ಲಿ ನಗರಸಭಾ ಸದಸ್ಯ ಎಂ. ಜಿ. ಶ್ರೀನಿವಾಸ್ ಅಧ್ಯಕ್ಷರಾಗಿ ಪುನರಾಯ್ಕೆಗೊಂಡು ಅವರ ತಂಡ 16ಸ್ಥಾನ ಗೆಲ್ಲುವ ಮೂಲಕ ಮೇಲುಗೈ ಸಾಧಿಸಿದೆ. ಎದುರಾಳಿ ಕೆ. ಜಿ. ದಿನೇಶ್ ತಂಡದ ನಾಲ್ವರು ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ.

ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿಗಳ ವಿವರ-
ಅಧ್ಯಕ್ಷ-ಶ್ರೀನಿವಾಸ್ ಎಂ. ಜಿ., ಉಪಾಧ್ಯಕ್ಷರಾಗಿ-ಅಮರಾನಾಥ್ ಬಿ. ಜಿ.
, ಚಿಕ್ಕಣ್ಣ ಎನ್. ಎಸ್, ಗೌರವ ಕಾರ್ಯದರ್ಶಿ-ಅಮರ್ ನಾಥ್ ಎಂ. ಜಿ., ಸಹ ಕಾರ್ಯದರ್ಶಿ-ನಟರಾಜ್ ಎ. ಯೋಗ, ಖಜಾಂಚಿ-ಅಖಿಲೇಶ್ ಹೆಚ್. ವಿ., ನಿರ್ದೇಶಕರಾಗಿ ಮಂಜುನಾಥ್ ಕೆ. ಎಸ್, ಮಹೇಶ್ ಎಲ್, ವತ್ಸಲಾ ಎಸ್, ಕುಮಾರ್ ಎನ್. ಜಿ,

- Advertisement - 

ಜನಾರ್ದನ್ ಕೆ. ಎನ್, ರಾಘವೇಂದ್ರ ವಿ. ಎಸ್, ಪ್ರಭಾಕರ್ ಗೆದರೆ, ನರೇಂದ್ರ ಕೆ. ಎಸ್., ನಟರಾಜ್ ಎನ್. ಎಸ್, ಲಕ್ಷ್ಮಿಕಾಂತ್ ಡಿ. ಎ, ನಿರ್ಮಲ ವಿ., ಪ್ರಿಯಾಂಕಾ ಬಿ. ಪಿ, ಗೋಪಾಲ ಕೃಷ್ಣ ಪಿ. ಹೆಚ್, ಶಿವಕುಮಾರ್ ಜಿ. ಸಿ.

ದೇವಾಂಗ ಮಂಡಳಿ ಚುನಾವಣೆಯಲ್ಲಿ ನನ್ನನ್ನು ಪುನರಾಯ್ಕೆ ಮಾಡಿ ನಮ್ಮ ತಂಡವನ್ನು ಆಯ್ಕೆ ಮಾಡುವ ಮೂಲಕ ದೇವಾಂಗ ಸಮುದಾಯ ನಮಗೆ ಹೆಚ್ಚಿನ ಬೆಂಬಲ ನೀಡಿದೆ. ಸಮುದಾಯ ನೀಡಿದ ಸಹಕಾರಕ್ಕೆ ನಾವುಗಳೆಲ್ಲರೂ ಅಭಾರಿಗಳಾಗಿದ್ದೇವೆ.

- Advertisement - 

ಮುಂಬರುವ ದಿನಗಳಲ್ಲಿ ಧಾರ್ಮಿಕ, ಸಾಮಾಜಿಕ ಸೇರಿದಂತೆ ರಚನಾತ್ಮಕ ಕಾರ್ಯಗಳ ಮೂಲಕ ಸಮುದಾಯದ ಸರ್ವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ದೇವಾಂಗ ಸಮುದಾಯದ ಪ್ರಗತಿಗೆ ದುಡಿಯುವ ಪ್ರಾಮಾಣಿಕ ಪ್ರಯತ್ನವನ್ನು ಮುಂದುವರೆಸುತ್ತೇನೆ. ಮತ್ತೊಮ್ಮೆ ನಮ್ಮ ಬೆಂಬಲಕ್ಕೆ ಸಹಕರಿಸಿದ ದೇವಾಂಗ ಸಮಾಜದ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಶ್ರೀನಿವಾಸ್ ಎಂ. ಜಿ, ಅಧ್ಯಕ್ಷರು, ದೇವಾಂಗ ಮಂಡಲಿ.

 

 

 

Share This Article
error: Content is protected !!
";