ನವರಾತ್ರಿ ಪ್ರಯುಕ್ತ ದೇವಾಲಯಗಳಲ್ಲಿ ವಿಶೇಷ ಅಲಂಕಾರ
ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ದೇವಾಲಯಗಳಲ್ಲಿ ನವರಾತ್ರಿ ಪ್ರಯುಕ್ತ ವಿಶೇಷ ಅಲಂಕಾರ ಹಾಗೂ ಪೂಜೆಗಳನ್ನು ನೆರವೇರಿಸಲಾಗುತ್ತಿದ್ದು ಮೂರನೇ ದಿನದ ತಾಲ್ಲೂಕಿನ ಶ್ರೀ ಕ್ಷೇತ್ರ ಚಿಕ್ಕ ಮಧುರೆಯಲ್ಲಿ ಶ್ರೀ ಶನಿಮಹಾತ್ಮ ದೇವರಿಗೆ ವಿಶೇಷ ಅಲಂಕಾರ ಮಾಡಿ
ಹಾಗೂ ಪೂಜೆ ಸಲ್ಲಿಸಲಾಯಿತು.ಕಾರ್ಯಕಾರಿ ಸಮಿತಿಯ ಅಧ್ಯಕ್ಷ ಹಾಗೂ ಪ್ರಧಾನ ಅರ್ಚಕ ಸತ್ಯನಾರಾಯಣ ಹಾಗೂ ಸಮಿತಿ ಸದಸ್ಯರು ಹಾಜರಿದ್ದರು.
ನವರಾತ್ರಿ ಹಬ್ಬದ ಪ್ರಯುಕ್ತ ನಗರದ ಸ್ವಯಂಭೇಶ್ವರಸ್ವಾಮಿ ದೇವಾಲಯದ ಮೀನಾಕ್ಷಿ ಸಮೇತ ಸ್ವಯಂಭೇಶ್ವರಸ್ವಾಮಿ ದೇವರಿಗೆ ಭಕ್ತಾದಿಗಳ ಅಪೇಕ್ಷೆ ಮೇರೆಗೆ ಕಡಲೆಕಾಯಿ ಅಲಂಕಾರ ನೆರವೇರಿಸಲಾಯಿತು.ಇದು ಭಕ್ತರ ಗಮನ ಸೆಳೆದಿತ್ತು.

