ಮತದಾರರ ಪಾತ್ರ ಕುರಿತು ಪ್ರಬಂಧ ಬರೆದು ಪ್ರಥಮ ಸ್ಥಾನ ಪಡೆದ ಚಂದನ್ ಅವಂಟಿ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಯಾದಗಿರಿ:
ಪರಮ ಪೂಜ್ಯ ಶ್ರೀ ಮಲ್ಲಣ್ಣ ಕಟ್ಟಿಮನಿ ರವರ ಸ್ಮರಣಾರ್ಥವಾಗಿ, ಶ್ರೀ ಭುವನೇಶ್ವರಿ ದೇವಿ ಟ್ರಸ್ಟ್ ವತಿಯಿಂದ ಜಿಲ್ಲಾ ಮಟ್ಟದಲ್ಲಿ ಆಯೋಜಿಸಲಾದ ಪ್ರಬಂಧ ಸ್ಪರ್ಧೆಯಲ್ಲಿ ಚಂದನ್ ಅವಂಟಿ ಅವರು ಪ್ರಥಮ ಸ್ಥಾನ ಪಡೆದು ತಮ್ಮ ಪ್ರತಿಭೆ ಮೆರೆದಿದ್ದಾರೆ.

ಈ ಸ್ಪರ್ಧೆಯಲ್ಲಿ ಜಿಲ್ಲೆಯ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿದ್ದು, ತೀವ್ರ ಸ್ಪರ್ಧೆಯ ನಡುವೆಯೂ ಕು. ಚಂದನ್ ಎಸ್. ಅವಂಟಿ ಅವರು ಭಾರತೀಯ ರಾಜಕೀಯ ವ್ಯವಸ್ಥೆಯಲ್ಲಿ ಮತದಾರರ ಪಾತ್ರಎಂಬ ವಿಷಯದ ಮೇಲೆ ಆಳವಾದ ಚಿಂತನೆ, ವಿಶ್ಲೇಷಣೆ ಮತ್ತು ಸರಳ ಅಭಿವ್ಯಕ್ತಿಯಿಂದ ತೀರ್ಪುಗಾರರ ಮನ ಗೆದ್ದಿದ್ದಾರೆ.

- Advertisement - 

ವಿದ್ಯಾರ್ಥಿಯಾಗಿದ್ದರೂ ರಾಜಕೀಯದ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿರುವ ಅವರು, ಸಮಾಜದಲ್ಲಿ ಜನಜಾಗೃತಿ ಮೂಡಿಸುವ ಅಗತ್ಯವನ್ನು ತಮ್ಮ ಪ್ರಬಂಧದಲ್ಲಿ ಹೊಂದಿದ್ದು, ಮತದಾರರು ದೇಶದ ಭವಿಷ್ಯ ರೂಪಿಸುವ ಶಕ್ತಿಶಾಲಿ ಅಸ್ತ್ರವೆಂಬ ಸಂದೇಶವನ್ನು ಪ್ರಸ್ತಾಪಿಸಿದ್ದಾರೆ.

ಅವರ ಈ ರಾಜಕೀಯ ಚಿಂತನೆ ಹಾಗೂ ಬೌದ್ಧಿಕ ಕೌಶಲ್ಯವನ್ನು ಗುರುಗಳು ಹಾಗೂ ತೀರ್ಪುಗಾರರು ಮೆಚ್ಚಿಕೊಂಡಿದ್ದು ಚಂದನ್ ಎಸ್. ಅವಂಟಿ ರವರಿಗೆ ಹೃತ್ಪೂರ್ವಕ ಅಭಿನಂದನೆಗಳು ಹಾಗೂ ಭವಿಷ್ಯದ ಶಿಕ್ಷಣ-ಸಾಹಿತ್ಯ-ರಾಜಕೀಯ ಪಯಣದಲ್ಲಿ ಮುಂದೆ ಸಾಗಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಿ ಎಂದು ಶುಭಾಶಯ ಕೋರಿದ್ದಾರೆ.

- Advertisement - 

Share This Article
error: Content is protected !!
";