ರಾಜಾರೋಷವಾಗಿ ನಡೆಯುತ್ತಿರುವ ಅಕ್ರಮ ಮದ್ಯ ಮಾರಾಟ

News Desk
- Advertisement -  - Advertisement - 

ಎಂ.ಎಲ್.ಗಿರಿಧರ, ಮಲ್ಲಪ್ಪನಹಳ್ಳಿ.
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರು ನಗರ ಸೇರಿದಂತೆ ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಅಕ್ರಮ ಮದ್ಯ ಮಾರಾಟ ರಾಜಾರೋಷವಾಗಿ ನಡೆಯುತ್ತಿದ್ದು, ಮದ್ಯ ಮಾರಾಟದಿಂದ ಉಂಟಾಗುತ್ತಿರುವ ಕೌಟುಂಬಿಕ ಸಮಸ್ಯೆಗಳಿಂದ ಮಹಿಳೆಯರು ಬೇಸತ್ತು ಕುಟುಂಬದಲ್ಲಿ ಅಶಾಂತಿ ಮೂಡುತ್ತಿದ್ದು ನಿತ್ಯ ಮಹಿಳೆಯರು ಸಂಕಷ್ಟ ಅನುಭವಿಸುವಂತಾಗಿದೆ.

ಅಕ್ರಮ ಮದ್ಯ ಮಾರಾಟ ತಡೆಯಬೇಕಾದ ಅಬಕಾರಿ ಇಲಾಖೆ ಬೆಂಬಲಕ್ಕೆ ನಿಂತಂತೆ ಕಾಣುತ್ತಿದೆ.
ತಾಲೂಕಿನಲ್ಲಿ ಎಗ್ಗಿಲ್ಲದೆ ಮದ್ಯ ಮಾರಾಟ ಮಾಡುತ್ತಿದ್ದರು ಕಣ್ಮುಚ್ಚಿ ಕುಳಿತಿರುವ ಅಬಕಾರಿ ಇಲಾಖೆ ಇದ್ದರೂ ಇಲ್ಲದಂತಾಗಿದೆ. ಅಬಕಾರಿ ಇಲಾಖೆ ಅಧಿಕಾರಿಗಳ ಭಯವಿಲ್ಲದೆ ತಾಲೂಕಿನ ಹಳ್ಳಿ ಹಳ್ಳಿಗಳಲ್ಲೂ ಕಿರಾಣಿ ಅಂಗಡಿಗಳಲ್ಲಿ ಬೀದಿ ಬದಿಯ ಶೆಡ್ ಗಳಲ್ಲಿ, ಹೋಟೆಲ್ ಗಳಲ್ಲಿ ಮದ್ಯ ಮಾರಾಟ ರಾಜಾರೋಷವಾಗಿ ನಡೆಯುತ್ತಿರುವ ಕುರಿತು ಸಾಕಷ್ಟು ಆರೋಪಗಳು ಕೇಳಿ ಬಂದಿದೆ.

- Advertisement - 

ಸುಲಭವಾಗಿ ಯುವ ಪೀಳಿಗೆ ಕೈಗೆ ಮದ್ಯ ಸಿಗುತ್ತಿದ್ದು ಚಿಕ್ಕ ವಯಸ್ಸಿನಲ್ಲೇ ಕುಡಿತಕ್ಕೆ ಬಲಿಯಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ.
ಯುವ ಪೀಳಿಗೆಗೆ ತಮ್ಮ ತಂದೆ ತಾಯಿಗಳು, ಪೋಷಕರು, ಗುರು ಹಿರಿಯರ ಭಯವಿಲ್ಲದೆ ಎಷ್ಟೋ ಕುಟುಂಬಗಳು ನೆಮ್ಮದಿಯನ್ನೇ ಕಳೆದುಕೊಂಡಿವೆ.

ತಂದೆ ತಾಯಿಗಳು ಕೂಲಿನಾಲಿ ಮಾಡಿ ಮಕ್ಕಳ ಭವಿಷ್ಯ ರೂಪಿಸಲು ಶ್ರಮ ಪಡುತ್ತಿದ್ದರೂ ಏನು ಪ್ರಯೋಜನವಿಲ್ಲದಂತಾಗಿದೆ. ಚಿಕ್ಕ ಚಿಕ್ಕ ವಯಸ್ಸಿನ ಹುಡುಗರು ಮದ್ಯಪಾನ ಮಾಡುತ್ತಿರುವುದರಿಂದ ಊರಲ್ಲಿ ಯಾರು ಕುಡುಕರು ಯಾರು ಸಭ್ಯರು ಎನ್ನುವ ವ್ಯತ್ಯಾಸ ಇಲ್ಲದಂತಾಗಿದೆ.

- Advertisement - 

ಕುಡಿದ ಅಮಲಿನಲ್ಲಿ ಎಷ್ಟೋ ಜಗಳವಾಡಿ ಮನೆಯಲ್ಲಿ ನೆಮ್ಮದಿಯನ್ನೇ ಕೆಡಿಸುವಂತ ಯುವ ಪೀಳಿಗೆ ಕುಡಿತದ ಚಟಕ್ಕೆ ಬಲಿಯಾಗಿ ಜೀವನವನ್ನೇ ಹಾಳು ಮಾಡಿಕೊಳ್ಳುತ್ತಿರುವ ಸನ್ನಿವೇಶಗಳು ಪ್ರತಿ ಊರು ಕೇರಿಗಳಲ್ಲಿ ಕಂಡು ಬರುತ್ತಿದೆ. ದುಡಿಮೆ ಮಾಡಿದ ಹಣ ಕುಟುಂಬದ ನಿವಾರಣೆಗಾಗಿ ಕೊಡದೆ ಎಷ್ಟೋ ಯುವಕರು ಮದ್ಯಪಾನಕ್ಕೆ ದಾಸರಾಗಿ ಕುಟುಂಬದಲ್ಲಿ ಕಲಹ ಸಾಮಾನ್ಯವಾಗಿದೆ. ಅಬಕಾರಿ ಇಲಾಖೆ ಯುವ ಪೀಳಿಗೆಯ ಭವಿಷ್ಯದ ದೃಷ್ಠಿಯಿಂದ ಹಳ್ಳಿಗಳಲ್ಲಿ ಮದ್ಯಪಾನ ಮಾರಾಟ ಮಾಡುವರ ವಿರುದ್ಧ ಶಿಸ್ತುಕ್ರಮ ಕೈಗೊಂಡರೆ ಎಷ್ಟೋ ಕುಟುಂಬಗಳು ನೆಮ್ಮದಿಯ ಬದುಕು ಕಟ್ಟಿಕೊಳ್ಳುವ ಸಾಧ್ಯತೆ ಇರುತ್ತದೆ.

ಎಷ್ಟೋ ಊರು ಕೇರಿಗಳ ಯುವಕರು ಏಕೆ ದೊಡ್ಡವರೇ ಮದ್ಯಪಾನದಿಂದ ದೂರ ಇರುವುದು ಕಂಡು ಬಂದಿದೆ. ಇದು ಇತರೆ ಊರುಗಳ ಯುವಕರಿಗೆ ಒಳ್ಳೆಯ ಸಂದೇಶ ನೀಡಿದಂತಾಗಿದೆ.

ಎಷ್ಟೋ ಬಡ ಕುಟುಂಬಗಳಲ್ಲಿ ಜೀವನ ಸಾಗಿಸುವುದೇ ತುಂಬಾ ಕಷ್ಟದ ಪರಿಸ್ಥಿತಿ ಇರುತ್ತದೆ. ಅದರ ಜೊತೆಗೆ ಇಡೀ ಕುಟುಂಬದ ಪುರುಷಕರು ಕುಡಿತದಂತಹ ಚಟಕ್ಕೆ ಬಿದ್ದು ಸಮಸ್ಯೆಗಳನ್ನು ಎದುರಿಸುವುದರಿಂದ ಮಹಿಳೆಯರು ನಿತ್ಯ ಸಂಕಷ್ಟ ಮತ್ತು ನೋವುಗಳನ್ನು ಅನುಭವಿಸುತ್ತಿದ್ದಾರೆ.

ಕುಡುಕರ ಹಾವಳಿಯಿಂದಾಗಿ ಕೇವಲ ಕುಟುಂಬಗಳಲ್ಲಿ ಅಶಾಂತಿ ಮೂಡದೇ ಊರುಗಳಲ್ಲೂ ಅಶಾಂತಿ ಮೂಡಿದೆ. ಕುಡಿತದ ಚಟಕ್ಕೆ ಬಲಿಯಾಗಿರುವ ಕುಟುಂಬಗಳಲ್ಲಿ ಮಕ್ಕಳ ವಿದ್ಯಾಭ್ಯಾಸ, ಕುಟುಂಬ ನಿವಾರಣೆ ಮಾಡಲು ತುಂಬಾ ಕಷ್ಟದ ಪರಿಸ್ಥಿತಿ ಎದುರಿಸುತ್ತಿದ್ದಾರೆ.

ಹಳ್ಳಿಗಳಲ್ಲಿ ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕದಿದ್ದಲ್ಲಿ ಎಷ್ಟೋ ಕುಟುಂಬಗಳು ಜೀವನ ಸಾಗಿಸುವುದೇ ಕಷ್ಟ ಆಗಲಿದೆ. ಅಬಕಾರಿ ಇಲಾಖೆಯವರು ಎಚ್ಚೆತ್ತುಕೊಂಡು ಹಳ್ಳಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುವ ವಿರುದ್ಧ ಶಿಸ್ತುಕ್ರಮ ವಹಿಸಿದರೆ ನೊಂದ ಕುಟುಂಬದವರಿಗೆ ದಾರಿದೀಪವಾಗಬಹುದು.

ಮದ್ಯ ಮಾರಾಟ ಸರ್ಕಾರಕ್ಕೆ ಆದಾಯದ ಪ್ರಮುಖ ಮೂಲವಾಗಿದೆ  ಮದ್ಯಪಾನ ದಿಂದ ಆರೋಗ್ಯದ ಮೇಲೆ ಉಂಟಾಗುವ ಪರಿಣಾಮಗಳ ಅರಿವಿದ್ದರು ಶಿಕ್ಷಿತರು ಯುವಜನರು ಮತ್ತು ಮಹಿಳೆಯರು ಕೂಡ ಮದ್ಯದ ಚಟಕ್ಕೆ ಒಗ್ಗಿಕೊಂಡಿದ್ದಾರೆ ಕಠಿಣ ನಿಯಮಗಳು ಜಾರಿಯಲ್ಲಿದ್ದರೂ ತಾಲೂಕಿನ ಬಹುತೇಕ ಹಳ್ಳಿಗಳಲ್ಲಿ ಮತ್ತು ಹೆದ್ದಾರಿ ಹೋಟೆಲ್, ಡಾಬಾಗಳಲ್ಲಿ ಗೂಡಂಗಡಿಗಳಲ್ಲಿ ಹೇರಳವಾಗಿ ಮದ್ಯದ ಸೀಸೆಗಳು ದೊರೆಯುತ್ತಿವೆ.

ಒಂದೆಡೆ ಮದ್ಯ ಸೇವನೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಆರೋಗ್ಯ ಮತ್ತು ಪೊಲೀಸ್ ಇಲಾಖೆಯ ಆಶ್ರಯದಲ್ಲಿ ವ್ಯಾಪಕ ಪ್ರಚಾರ ಕೂಡ ನಡೆಯುತ್ತದೆ. ಮದ್ಯದ ಪರವಾಗಿ ಮತ್ತು ವಿರೊಧವಾಗಿ ಸರ್ಕಾರವೇ ಪ್ರಚಾರ ನಡೆಸುವುದರಿಂದ ಅಕ್ರಮ ಮದ್ಯ ಮಾರಾಟ ಮಾಡುವವರ ಬಗ್ಗೆ ಕ್ರಮಜರುಗಿಸುವುದು ಯಾರು ಎಂಬ ಪ್ರಶ್ನೆ   ನಮಗೆ ನಾವೇ ಮಾಡಿಕೊಳ್ಳುವಂತೆ ಆಗಿದೆ.
ಚಮನ್ ಷರೀಫ್, ಆದಿವಾಲ, ಸಾಮಾಜಿಕ ಕಾರ್ಯಕರ್ತ.

ಮದ್ಯ ಮಾರಾಟಕ್ಕೆ ಅಬಕಾರಿ ಇಲಾಖೆ ಕಡಿವಾಣ ಹಾಕದಿದ್ದರೆ ಹಳ್ಳಿ ಹಳ್ಳಿಗಳಲ್ಲಿ ಮದ್ಯ ಮಾರಾಟ ದಂಧೆ ಹೆಚ್ಚಾಗುತ್ತದೆ. ಕೂಲಿ ಕಾರ್ಮಿಕರ ದುಡಿದ ಹಣವೆಲ್ಲ ಮದ್ಯಕ್ಕೆ ಸುರಿಯುವುದರಿಂದ ಊಟಕ್ಕೂ ಪರಿತಪಿಸುವ ಕುಟುಂಬಗಳು ನರಕಯಾತನೆ ಅನುಭವಿಸುತ್ತಿದ್ದಾರೆ.

ಮದ್ಯ ಸೇವೆಯಿಂದಾಗಿ ಕುಟುಂಬಗಳು ಬೀದಿ ಪಾಲಾಗುವುದರಲ್ಲಿ ಸಂಶಯವೇ ಇಲ್ಲ. ಅಬಕಾರಿ ಇಲಾಖೆ ತಾಲೂಕಿನಾದ್ಯಂತ ಅಕ್ರಮ ಮದ್ಯ ಮಾರಾಟ ಮಾಡವರು ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕಾಗುತ್ತದೆ”.
ರಾಮಚಂದ್ರಪ್ಪ, ಕಸವನಹಳ್ಳಿ.

 

Share This Article
error: Content is protected !!
";