ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೆಳಕಿನ ಕಿರಣ…
ಓಂ
ಹೇ ಮಾನವ
ನೀ ನೆಡೆಯುವ ದಾರಿಯಲ್ಲಿ
ಎಲ್ಲಾ ಖಾಲಿ ಖಾಲಿ
ದೇಗುಲದ ಮುಂದಿನ
ದೇವರ ಪಾದಕ್ಕೆಗಳು
ನಿನ್ನ ಕೈ ಸೋಕಿ
ಕರಗುತ್ತಿರುವವು
ಹೇ ಮಾನವ
ನಿನ್ನ ಮನಸ್ಸು
ಇನ್ನು ತಿಳಿಯಾಗಿಲ್ಲ
ಅರಿವಿನ
ಆದಿಯನ್ನು
ನೀ ಹಿಡಿದಿಲ್ಲ ಇನ್ನು
ನೀನು ದೇಗುಲಗಳ ಸುತ್ತಿದರು
ಮುಟ್ಟಬೇಡ
ಯಾವುದೊಂದು ಕಲ್ಲು ಅಲ್ಲಿ

ಅರಿವು ಬರುವ ತನಕ
ಹೋಗದಿರು ಕಷ್ಟಗಳ ನೆನೆದು ದೇಗುಲಕ್ಕೆ
ಕವಿತೆ: ಸರಿತ ಹೆಚ್, ಕಾಡುಮಲ್ಲಿಗೆ.

