ಕಣಜನಹಳ್ಳಿಯಲ್ಲಿ ಗಮನ ಸೆಳೆದ ವಾಲ್ಮೀಕಿ ಮೆರವಣಿಗೆ

News Desk

ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರ್ ತಾಲೂಕಿನ ಕಣಜನಹಳ್ಳಿ ಗ್ರಾಮದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಅಂಗವಾಗಿ ಅದ್ಧೂರಿ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು.

ಮಹರ್ಷಿ ವಾಲ್ಮೀಕಿ ಜಯಂತಿ ಅಂಗವಾಗಿ ಗ್ರಾಮದಲ್ಲಿ ನಡೆದ ಮೆರವಣಿಗೆಯಲ್ಲಿ ವಾಲ್ಮೀಕಿ ಭಾವಚಿತ್ರದೊಂದಿಗೆ ನಡೆದ ಮರೆವಣಿಗೆಯಲ್ಲಿ ಮಹಿಳೆಯರು ಪೂರ್ಣಕುಂಭದೊಂದಿಗೆ ಹೆಜ್ಜೆ ಹಾಕಿದ್ದು ನೋಡುಗರ ಗಮನ ಸೆಳೆಯಿತು.

- Advertisement - 

ಕಣಜನಹಳ್ಳಿ ಗ್ರಾಮದ ದೇವಾಲಯದ ಬಳಿಯಿಂದ ಹೊರಟ ಮೆರವಣಿಯಲ್ಲಿ ನೂರಾರು ಕಳಸ ಹೊತ್ತ ಹೆಂಗಳೆಯರು ಮೆರವಣಿಗೆಗೆ ಮೆರುಗು ನೀಡಿದರು. ಮಂಗಳವಾದ್ಯ ಮೆರವಣಿಗೆ ಕಳೆಗಟ್ಟುವಂತೆ ಮಾಡಿತು.

ಮಹರ್ಷಿ ವಾಲ್ಮೀಕಿಯ ಭಾವಚಿತ್ರದೊಂದಿಗೆ ಹೆಜ್ಜೆ ಹಾಕಿದ ನೂರಾರು ಜನರ ನಡಿಗೆಯನ್ನು ರಸ್ತೆಯ ಇಕ್ಕೆಲಗಳಲ್ಲಿನಿಂತು ವೀಕ್ಷಿಸಿದ ನಾಗರಿಕರು ಸಂಭ್ರಮಿಸಿದರು.

- Advertisement - 

ಇಡೀ ಮೆರವಣಿಗೆಯಲ್ಲಿ ಚಿಕ್ಕ ಮಕ್ಕಳು, ಮಹಿಳೆಯರು, ಪುರುಷರು ಕೇಸರಿ ಬಣ್ಣದ ಸಮವಸ್ತ್ರ ಧರಿಸಿ ಗಮನ ಸೆಳೆದರು. ಮಕ್ಕಳು ಕುಣಿದ ಕುಪ್ಪಳಿಸಿದರು. ಪಟಾಕಿಗಳ ಸದ್ದು ಕೂಡ ಜೋರಾಗಿತ್ತು.

 

 

Share This Article
error: Content is protected !!
";