ರೈತರ ನೆಲದಲ್ಲಿ ಅರಳುತ್ತಿರುವ ಹಸಿರು ವಜ್ರ!

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರೆಡ್ ಡೈಮಂಡ್ ಪೇರಲ: ಬಾಬಾನಗರದ ನೆಲದಲ್ಲಿ ಅರಳುತ್ತಿದೆ ಹಸಿರು ವಜ್ರ! ಎಂದು ಬೃಹತ್ ಕೈಗಾರಿಕೆ ಸಚಿವ ಎಂ.ಬಿ ಪಾಟೀಲ್ ತಿಳಿಸಿದರು.

ಬಾಬಾನಗರದ ಪ್ರಗತಿಪರ ರೈತರಾದ ಸಿದ್ರಾಮಪ್ಪ ಬಿರಾದಾರ್ ಅವರು ಈ ದಿನ ನನ್ನನ್ನು ಭೇಟಿಮಾಡಿದರು. ತಮ್ಮ 1 ಎಕರೆ ಭೂಮಿಯಲ್ಲಿ ಸಾವಯವ ಕೃಷಿ ಮೂಲಕ ರೆಡ್ ಡೈಮಂಡ್ ತಳಿಯ ಪೇರಲ ಹಣ್ಣು ಬೆಳೆಯುತ್ತಿರುವುದಾಗಿ ತಿಳಿಸಿ ತಾವು ಬೆಳೆದ ಪೇರಲ ಹಣ್ಣಿನ ಉಡುಗೊರೆ ನೀಡಿದರು ಎಂದು ಪಾಟೀಲ್ ಹೇಳಿದರು.

- Advertisement - 

ದೂರದ ಗುಜರಾತ್ ನಿಂದ ಈ ವಿಶೇಷ ತಳಿಯ ಬೀಜ ತರಿಸಿ ಹಣ್ಣು ಬೆಳೆದಿರುವುದಾಗಿ ತಿಳಿಸಿದ ಅವರು ಹೆಚ್ಚಿನ ನೀರಾವರಿ ಬೇಡುವ ಈ ತಳಿಗೆ ನಮ್ಮ ನೀರಾವರಿ ಯೋಜನೆಗಳು ನೆರವಾದವೆಂದು ಅಭಿಮಾನದಿಂದ ನುಡಿದರು.

ವರ್ಷಕ್ಕೆ 2 ಬಾರಿ ಬೆಳೆಯಬಹುದಾದ ಹಣ್ಣು ಇದಾಗಿದ್ದು ವಾರ್ಷಿಕ 7-8 ಲಕ್ಷ ಗಳಿಸಬಹುದು ಎಂದು ಹರ್ಷ ವ್ಯಕ್ತಪಡಿಸಿದರು. ಅವರ ಸಾರ್ಥಕ ಯಶೋಗಾಥೆ ಕೇಳಿ ಸಂತಸವಾಯಿತು. ತೋಟಗಾರಿಕೆ ಮತ್ತಷ್ಟು ಯಶಸ್ವಿಯಾಗಲೆಂದು ಸಚಿವ ಎಂ.ಬಿ ಪಾಟೀಲ್ ಹಾರೈಸಿದರು.

- Advertisement - 

ಇಂತಹ ನೂತನ ಪ್ರಯತ್ನಗಳು ನಮ್ಮ ಜಿಲ್ಲೆಯ ಕೃಷಿ, ತೋಟಗಾರಿಕೆಯನ್ನು ಮತ್ತಷ್ಟು ಎತ್ತರಕ್ಕೆ ಒಯ್ಯಲಿದೆ ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದರು.

 

Share This Article
error: Content is protected !!
";