ಸರ್ಕಾರ ಕೇಳು, ಕಬ್ಬಿನ ಕಹಿ ಮಾತು!

News Desk

ಚಂದ್ರವಳ್ಳಿ ನ್ಯೂಸ್, ಯಾದಗಿರಿ:
ಸರ್ಕಾರ ಕೇಳು, ಕಬ್ಬಿನ ಕಹಿ ಮಾತು!
ಸರ್ಕಾರ ಕೇಳು!

ಕಬ್ಬು ಕಡಿಯುವ ರೈತನ ಕೈ ಕಡಿಯಬೇಡ,
ಅವನ ಬೆವರು ನಾಡಿನ ಸಿಹಿಯ ಬೀಜ ಬೇಡ!

- Advertisement - 

ನಿನ್ನ ಕಚೇರಿಯ ಚಹಾದಲ್ಲಿ ಸಕ್ಕರೆ ಇದೆ,
ಆದರೆ ಆ ಸಕ್ಕರೆಯ ಹಿಂದೆ-ರೈತನ ಕಣ್ಣೀರು ಮುದ್ದಿದೆ!

ಬೆಲೆಗೆ ಮಾತು ಕೊಟ್ಟೆ, ಆದರೆ ಜಾರಿಬಿಟ್ಟೆ,
ನಂಬಿಕೆಯ ಮೇಲೆ ನಿಂತವನ ಮನ ಮುರಿದಿಟ್ಟೆ!

- Advertisement - 

ಮೆಜಿನ ಮೇಲೆ ಅಂಕೆಗಳು ನಿನಗಿರಬಹುದು,
ಆದರೆ ಹೊಲದ ಮೇಲೆ ಆತ್ಮಗಳಿವೆ-ಅದೇ ನಮ್ಮ ರೈತರು!

ಸಲ್ಲು ಬೆಲೆಯಲ್ಲ, ಸತ್ಯದ ಬೆಲೆ ಕೊಡು,
ಹೋರಾಟದ ಬದಲು ಗೌರವದ ಬೆಳಕು ಕೊಡು!

ರೈತನ ಕಣ್ಣೀರು ನದಿಯಂತೆ ಹರಿಯದಿರಲಿ,
ಆ ನದಿಯಲ್ಲಿ ನಿನ್ನ ಸರ್ಕಾರ ಮುಳುಗದಿರಲಿ!

ಸಕ್ಕರೆ ಸಿಹಿ ಆಗಲಿ,
ಆದರೆ ನ್ಯಾಯವೇ ಅದರ ನಿಜವಾದ ಸಿಹಿ ಆಗಲಿ!
ಕವಿತೆ-
ಚಂದನ್ ಅವಂಟಿ, ಇಡ್ಲೂರ್, ಯಾದಗಿರಿ.

 

Share This Article
error: Content is protected !!
";