ವಚನ ಸಂದೇಶ ಹಾಗೂ ಹಸಿರು ಜಾಗೃತಿಗಾಗಿ 300 ಕಿ.ಮೀ ಪಾದಯಾತ್ರೆ

News Desk

ಚಂದ್ರವಳ್ಳಿ ನ್ಯೂಸ್, ಹೊಳಲ್ಕೆರೆ:
ಉಳವಿ ಮಹಾಮನೆ ಪಾದಯಾತ್ರೆ ಸಮಿತಿ, ಉಳವಿ ಚನ್ನಬಸವೇಶ್ವರ ಮಹಾಮನೆ ದಾಸೋಹ ಸಮಿತಿ ಹಾಗೂ ಜಾಗತಿಕ ಲಿಂಗಾಯತ ಮಹಾಸಭಾ ಚಿತ್ರದುರ್ಗ ಘಟಕ ಇವರ ಸಹಯೋಗದಲ್ಲಿ ಅವಿರಳ ಜ್ಞಾನಿ ಚನ್ನಬಸವಣ್ಣನವರ ರಥೋತ್ಸವದ ಅಂಗವಾಗಿ

ಈ ತಿಂಗಳ ಅಥವಾ ಜನವರಿ 2026ರ ಮಾಹೆಯಲ್ಲಿ ಹೊಳಲ್ಕೆರೆ ಒಂಟಿ ಕಂಬದ ಮುರುಘಾಮಠದ ತಿಪ್ಪೇರುದ್ರ ಸ್ವಾಮಿಗಳ ನೇತೃತ್ವದಲ್ಲಿ ವಚನ ಸಂದೇಶ ಹಾಗೂ ಹಸಿರು ಜಾಗೃತಿಗಾಗಿ ಹೊಳಲ್ಕೆರೆಯಿಂದ ಉಳವಿವರೆಗೂ ಸುಮಾರು(300 ಕಿ.ಮೀ) ಪಾದಯಾತ್ರೆಯನ್ನು ಪ್ರಸಕ್ತ ಸಾಲಿನ ಮಾಹೆಯಲ್ಲಿ ಹಮ್ಮಿಕೊಳ್ಳಲಾಗುತ್ತಿದೆ.

- Advertisement - 

 ಅದರ ಅಂಗವಾಗಿ ಪಾದಯಾತ್ರೆಯ, ಉದ್ದೇಶ ದಿನಾಂಕ, ಆರಂಭ, ಅಂತ್ಯ ಮತ್ತು ಎಲ್ಲೆಲ್ಲಿ ಪಾದಯಾತ್ರೆ ಹಾದು ಹೋಗುತ್ತದೆ ಎಂಬ ವಿವರ ತಿಳಿಸುವ ಸಲುವಾಗಿ ಡಿಸೆಂಬರ್-8ರಂದು ಸೋಮವಾರ ಸಂಜೆ 4 ಗಂಟೆಗೆ ಒಂಟಿ ಕಂಬದ ಮುರುಘಾಮಠದ ಪ್ರಾಂಗಣದಲ್ಲಿ ಪೂರ್ವಭಾವಿ ಸಭೆ ಕರೆಯಲಾಗಿದೆ.

ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಲು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ 8431120312 ಹಾಗು 9945873926 ಈ ನಂಬರ್ ಗಳಿಗೆ ಸಂಪರ್ಕಿಸಲು ಕೋರಲಾಗಿದೆ.

- Advertisement - 

Share This Article
error: Content is protected !!
";