ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಶೌರ್ಯ ವಿಪತ್ತು ನಿರ್ವಹಣಾ ಘಟಕ ಗಳ ಕೋರ್ ಕಮಿಟಿ ಸಭೆ ದೊಡ್ಡಬಳ್ಳಾಪುರ ಯೋಜನಾ ಕಚೇರಿಯಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ನಿರ್ದೇಶಕ ಉಮರಬ್ಬ ಮಾತಾನಾಡಿ ಶೌರ್ಯ ತಂಡ ವಿಪತ್ತು ಗಳು ಎದುರಾದಾಗ ಅಗ್ನಿಶಾಮಕ ದಳ ಹಾಗೂ ಇತರ ಇಲಾಖೆ ಗಳೊಂದಿಗೆ ಸಹಕಾರ ಅತೀ ಮುಖ್ಯ ವಾಗಿರುತ್ತದೆ .ಇಲಾಖೆಯೊಂದಿಗೆ ಜನರ ಜೀವ ಆಸ್ತಿಪಾಸ್ತಿ ಕಾಪಾಡಲು ಇದು ಉತ್ತಮ ಅವಕಾಶ ವಾಗಿದೆ ಎಂದರು.
ತುರ್ತು ಸಂದರ್ಭದಲ್ಲಿ ಪ್ರಥಮ ಚಿಕಿತ್ಸೆ, ಆಸ್ಪತ್ರೆಗೆ ದಾಖಲಿಸಲು ಸಹಕಾರ, ಪ್ರವಾಸ ಮನೆ ಕುಸಿತ, ಭೂಕಂಪ ಸುನಾಮಿ ಸಂತ್ರಸ್ತರ ರಕ್ಷಣಾ ಕಾರ್ಯದಲ್ಲಿ ತಾವು ತೊಡಗಿಕೊಳ್ಳಬೇಕೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕೇಂದ್ರ ಕಛೇರಿಯ ಯೋಜನಾಧಿಕಾರಿ ಕಿಶೋರ್ , ದೊಡ್ಡಬಳ್ಳಾಪುರ ದಿನೇಶ್ ,ನೆಲಮಂಗಲ ಸುಜಾತಾ ,ದೇವನಹಳ್ಳಿ ರವಿರಾಜ್ ಸೇರಿದಂತೆ ಮೇಲ್ವಿಚಾರಕರು, ಘಟಕದ ಪ್ರತಿನಿಧಿಗಳು,ಸೇವಾಪ್ರತಿನಿದಿಗಳು ಉಪಸ್ಥಿತರಿದ್ದರು.

