ನಗರದ ಬನ್ನಿಮಂಟಪ ಹೋರಾಟ ಕೇಂದ್ರಮಾಡಲು ಯತ್ನ

News Desk
- Advertisement -  - Advertisement -  - Advertisement - 

ನಗರದ ಬನ್ನಿಮಂಟಪ ಹೋರಾಟ ಕೇಂದ್ರಮಾಡಲು ಯತ್ನ
ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ಕಳೆದ ಹಲವಾರು ವರ್ಷಗಳಿಂದ ತಾಲ್ಲೂಕಿನ ರೈತಸಂಘಟನೆ
, ಪ್ರಗತಿಪರ ಸಂಘಟನೆ, ವಿವಿಧ ರಾಜಕೀಯ ಪಕ್ಷಗಳು, ಕಾರ್ಮಿಕರಸಂಘಟನೆ ಹಾಗೂ ಕನ್ನಡಪರ ಸಂಘಟನೆಗಳ ಹೋರಾಟಗಾರರು, ವಿವಿಧ ಸಂಘಟನೆಗಳು ತಾಲ್ಲೂಕು ಕಚೇರಿ ಮುಂದೆ ಧರಣಿ, ಪ್ರತಿಭಟನೆ ನಡೆಸಿ ತಮ್ಮ ಬೇಡಿಕೆ ಈಡೇರಿಸುವಂತೆ ಸರ್ಕಾರವನ್ನು ಒತ್ತಾಯಿಸುವ ಪರಿಪಾಠ ನಡೆದುಬಂದಿದೆ.

ತಾಲ್ಲೂಕು ಆಡಳಿತ ಎಲ್ಲಾ ಪ್ರತಿಭಟನೆ ಹಾಗೂ ಮುಷ್ಕರವನ್ನು ಪ್ರತ್ಯೇಕ ಸ್ಥಳದಲ್ಲಿ ನಿಗದಿಗೊಳಿಸಲು ನಿರ್ಧರಿಸಿದ್ದು ಬಳ್ಳಾರಿ ರಸ್ತೆಯ ಬನ್ನಿಕಟ್ಟೆ ಪ್ರದೇಶದಲ್ಲಿ ಪ್ರತಿಭಟನೆ ಹಾಗೂ ಮುಷ್ಕರವನ್ನು ನಡೆಸಲು ಸ್ಥಳಪರಿಶೀಲನೆ ನಡೆಸಿದ್ದು ಇದು ಹೋರಾಟಗಾರರಿಗೆ ಇರಿಸುಮುರಿಸು ಉಂಟುಮಾಡಿದೆ.

- Advertisement - 

ಇಲ್ಲಿನ ಪ್ರವಾಸಿಮಂದಿರದಲ್ಲಿ ವಿವಿಧಸಂಘಟನೆಗಳು ಸಭೆಸೇರಿ ಚರ್ಚೆ ನಡೆಸಿದ್ದು, ಕರ್ನಾಟಕ ರಾಜ್ಯ ರೈತಸಂಘ ಹಾಗೂ ಹಸಿರುಸೇನೆ(ಪ್ರೊ.ಬಣ) ರಾಜ್ಯಉಪಾಧ್ಯಕ್ಷ ರೆಡ್ಡಿಹಳ್ಳಿವೀರಣ್ಣ ಮಾತನಾಡಿ, ಪ್ರತಿಭಟನೆಗೆ ಗ್ರಾಮೀಣಪ್ರದೇಶದಿಂದ ರೈತರು, ಮಹಿಳೆಯರು, ವಿದ್ಯಾರ್ಥಿಗಳು, ಬಡಕೂಲಿಕಾರ್ಮಿಕರು, ಅಸಂಘಟಿತಕಾರ್ಮಿಕರು ಬಂದು ಭಾಗವಹಿಸುತ್ತಾರೆ. ತಾಲ್ಲೂಕು ಕಚೇರಿ ಮುಂಭಾಗದಲ್ಲಿ ಅಥವಾ ಸಂಬಂಧಪಟ್ಟ ಇಲಾಖೆ ಮುಂದೆಪ್ರತಿಭಟನೆ ನಡೆಸಲು ಸರ್ಕಾರವೇ ಅನುವು ಮಾಡಿಕೊಟ್ಟಿದೆ. ಆದರೆ, ತಾಲ್ಲೂಕು ಆಡಳಿತ ಯಾರಗಮನಕ್ಕೂ ತಾರದೆ ತಾಲ್ಲೂಕು ಕಚೇರಿಯಿಂದ ಸುಮಾರು ಎರಡು ಕಿ.ಮೀ ದೂರ ಪ್ರದೇಶದಲ್ಲಿ ಪ್ರತಿಭಟನೆ ನಡೆಸಲು ಸಿದ್ದತೆಕೈಗೊಂಡಿರುವುದು ನೋವಿನ ಸಂಗತಿ. ಯಾವ ಸಂಘಟನೆಗಳು ಈ ನಿರ್ಧಾರವನ್ನು ಒಪ್ಪಲು ಸಾಧ್ಯವಿಲ್ಲ. ತಾಲ್ಲೂಕು ಆಡಳಿತ ಈ ಬಗ್ಗೆ ಕೈಗೊಂಡ ಸಿದ್ದತೆಯನ್ನು ಕೈಬಿಡದಿದ್ದರೆ ಮತ್ತೊಮ್ಮೆ ಹೋರಾಟ ನಡೆಸಲು ಸಿದ್ದವಿದ್ದೇವೆಂದು ತಿಳಿಸಿದರು.

ಕೆಆರ್‌ಎಸ್ ಪಕ್ಷದ ರಾಜ್ಯಸಂಚಾಲಕ ನಗರಂಗೆರೆ ಮಹೇಶ್ ಮಾತನಾಡಿ, ಅನೇಕ ಸಮಸ್ಯೆಗಳ ನಿವಾರಣೆಗೆ ಹೋರಾಟ ನಡೆಸುವುದು ಸ್ವಾಭಾವಿಕ. ಆದರೆ, ತಾಲ್ಲೂಕು ಆಡಳಿತ ಹೋರಾಟಗಾರರ ಆತ್ಮಬಲವನ್ನು ಕುಗ್ಗಿಸಲು ನಗರದ ಹೊರಪ್ರದೇಶದಲ್ಲಿ ವ್ಯವಸ್ಥೆ ಮಾಡಲು ಮುಂದಾಗಿರುವುದು ಸರಿಯಲ್ಲ. ಪ್ರತಿಯೊಬ್ಬರಿಗೂ ಹೋರಾಟ ಮಾಡುವ ಹಕ್ಕಿದ್ದು ಇದಕ್ಕೆ ಪೂರಕವಾಗಿ ತಾಲ್ಲೂಕು ಆಡಳಿತ ಸ್ಪಂದಿಸಬೇಕು ಎಂದಿದ್ದಾರೆ.

- Advertisement - 

ಅಖಂಡ ಕರ್ನಾಟಕ ರೈತ ಸಂಘದತಾಲ್ಲೂಕು ಅಧ್ಯಕ್ಷ ಚಿಕ್ಕಣ್ಣ, ಶ್ರೀಕಂಠಮೂರ್ತಿ, ಎಐಟಿಯುಸಿ ಜಿಲ್ಲಾಸಂಚಾಲಕ ಸಿ.ವೈ.ಶಿವರುದ್ರಪ್ಪ, ಕಾರ್ಯದರ್ಶಿ ದೊಡ್ಡ ಉಳ್ಳಾರ್ತಿಕರಿಯಣ್ಣ, ಪ್ರಗತಿಪರ ರೈತ ಆರ್.ಎ.ದಯಾನಂದಮೂರ್ತಿ, ಕಸಬಾ ಹೋಬಳಿ ತೊಗರಿ ಮತ್ತು ಶೇಂಗಾ ಬೆಳೆಗಾರರ ಸಂಘದ ಅಧ್ಯಕ್ಷ ಪ್ರೊ.ಸಿ.ಶಿವಲಿಂಗಪ್ಪ, ಕೆಆರ್‌ಎಸ್ ಪಕ್ಷದ ಮಾರುತಿ, ಬಾಲರಾಜು, ಕರ್ನಾಟಕ ರಕ್ಷಣಾ ವೇದಿಕೆ ಮುರುಳಿ, ಚಂದ್ರಣ್ಣ, ಮೈತ್ರಿದ್ಯಾಮಣ್ಣ, ಪಟೇಲ್, ವೀರಣ್ಣ ಮುಂತಾದವರು ಉಪಸ್ಥಿತರಿದ್ದರು.

 

Share This Article
error: Content is protected !!
";