ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರು ನಗರದ ಲಕ್ಕವ್ವನಹಳ್ಳಿ ರಸ್ತೆಯ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಅಯ್ಯಪ್ಪಸ್ವಾಮಿ ಮಾಲಾಧಾರಿ ಭಕ್ತರು ಮಂಡಲ ಪೂಜೆ ಮಾಡುವ ವಿಧಾನಗಳನ್ನು ಕಟ್ಟು ನಿಟ್ಟಾಗಿ ಪಾಲಿಸಿಕೊಂಡು ಬರುತ್ತಿದ್ದಾರೆ.
ಮಂಡಲ ಪೂಜೆ ಮಾಡುವ ವಿಧಾನದಲ್ಲಿ ಅತಿಮುಖ್ಯವಾಗಿ ಬ್ರಹ್ಮಚರ್ಯ ಪಾಲನೆ, ಅಯ್ಯಪ್ಪ ಸ್ವಾಮಿ ಭಕ್ತರು ಈ ಸಮಯದಲ್ಲಿ ಕಪ್ಪು ಅಥವಾ ನೀಲಿ ಬಣ್ಣ ಧೋತಿಯನ್ನು ಧರಿಸಿ ದೈಹಿಕ ಮತ್ತು ಮಾನಸಿಕವಾಗಿ ಶುದ್ಧತೆ ಕಾಪಾಡಿಕೊಂಡು ಬರುತ್ತಿದ್ದಾರೆ.
ಪ್ರತಿದಿನ ಬೆಳಗ್ಗೆ ತಣ್ಣೀರು ಸ್ನಾನದ ನಂತರ, ಅವರು ಅಯ್ಯಪ್ಪ ದೇವರನ್ನು ಧ್ಯಾನಿಸುತ್ತಾ ‘ಸ್ವಾಮಿಯೇ ಶರಣಂ ಅಯ್ಯಪ್ಪ‘ ಮಂತ್ರ ಪಠಿಸುತ್ತಾ ಕಠಿಣ ವ್ರತದಲ್ಲಿ ತೊಡಗಿದ್ದಾರೆ.
ಅಯ್ಯಪ್ಪ ಸ್ವಾಮಿ ಮಂಡಲ ಪೂಜೆ ಗುರುಗಳಾದ ಸದಾನಂದ ಸ್ವಾಮಿ, ಬದ್ರಿ ಸ್ವಾಮಿ, ಗೋಪಿನಾಥ ಸ್ವಾಮಿ, ಶಶಿ ಬಂಡಿ ಸ್ವಾಮಿ, ಚಂದ್ರ ಸ್ವಾಮಿ, ಮೈಲಾರಿ ಸ್ವಾಮಿ ಸೇರಿದಂತೆ ಮತ್ತಿತರ ಮಾಲಾಧಾರಿ ಸ್ವಾಮಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

