ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಗಂಧದ ನಾಡು ಡ್ರಗ್ಸ್ ಬೀಡಾಗಿರುವುದಕ್ಕೆ ಕರ್ನಾಟಕ ಕಾಂಗ್ರೆಸ್ ಸರ್ಕಾರದ ಸಹಕಾರವೂ ಇದೆ ಎಂಬ ಅನುಮಾನ ನಿಜವಾಗುತ್ತಿದೆ. ಡ್ರಗ್ಸ್ ದಂಧೆಯಲ್ಲಿ ಭಾಗಿಯಾಗಿರುವ ಆರೋಪದಲ್ಲಿ ಸಚಿವರಾದ ದಾವಣಗೆರೆ ಮಲ್ಲಿಕಾರ್ಜುನ್, ಜಮೀರ್ ಅಹಮದ್ ಆಪ್ತರು ಸೇರಿ 8 ಮಂದಿಯನ್ನು ಪೊಲೀಸರು ಬಂಧಿಸಿರುವುದೇ ಇದಕ್ಕೆ ಸಾಕ್ಷಿ ಎಂದು ಜೆಡಿಎಸ್ ಆರೋಪಿಸಿದೆ.
ಬೆಂಗಳೂರು ಹಾಗೂ ದಾವಣಗೆರೆಯಲ್ಲಿ ನಡೆದಿರುವ ದಾಳಿಯಲ್ಲಿ ಬಂಧಿತರಾದ ಇಬ್ಬರು ಕಾಂಗ್ರೆಸ್ ಸರ್ಕಾರದ ಪ್ರಭಾವಿ ಸಚಿವರ ಆಪ್ತರೇ ಡ್ರಗ್ಸ್ ವ್ಯವಹಾರದಲ್ಲಿ ನಡೆಸುತ್ತಿರುವುದು ಭ್ರಷ್ಟ ಕಾಂಗ್ರೆಸ್ ಸರ್ಕಾರದ ಅರಾಜಕತೆಗೆ ಹಿಡಿದ ಕೈಗನ್ನಡಿ.
ಕರ್ನಾಟಕದಲ್ಲಿ ಡ್ರಗ್ಸ್ , ಗಾಂಜಾ ಮಾದಕ ವಸ್ತುಗಳ ತಯಾರಿಕಾ ಘಟಕಗಳು ಅಕ್ರಮವಾಗಿ ತಲೆ ಎತ್ತಿದೆ.. ಆದರೆ ಗೃಹ ಇಲಾಖೆ ಕೈ ಕಟ್ಟಿ ಕುಳಿತಿದೆ.
ಹೊರ ರಾಜ್ಯಗಳ ಪೊಲೀಸರು ಕರ್ನಾಟಕಕ್ಕೆ ಬಂದು ಡ್ರಗ್ಸ್ ಫ್ಯಾಕ್ಟರಿಗಳ ಮೇಲೆ ದಾಳಿ ಮಾಡುತ್ತಿದ್ದರೂ, ನಮ್ಮ ರಾಜ್ಯದ ಪೊಲೀಸರಿಗೆ ಸಣ್ಣ ಸುಳಿವೂ ಇಲ್ಲವಾಗಿದೆ.ಇದನ್ನೆಲ್ಲ ನೋಡಿದರೇ, ಕಾಂಗ್ರೆಸ್ ಸರ್ಕಾರವೇ ಡ್ರಗ್ಸ್ ದಂಧೆಗೆ ಮೌನ ಸಮ್ಮತಿ ನೀಡಿದೆ ಎಂಬುದು ಸಾಬೀತಾಗುತ್ತಿದೆ ಎಂದು ಜೆಡಿಎಸ್ ತಿಳಿಸಿದೆ.

