ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಉದ್ಯಮ ಶೀಲತೆ ಹಾಗು ಮಹಿಳಾ ಸಬಲೀಕರಣ ಯಿಂದ 26 ದಿನಗಳ ಕಾಲ ಉಚಿತ ತರಬೇತಿಯನ್ನು ಆಯೋಜಿಸಿ, ಮಹಿಳೆಯರಿಗೆ ವಿವಿಧ ರೀತಿಯ ಪರಿಸರ ಸ್ನೇಹಿ ಕೃತಕ ಆಭರಣ ತಯಾರಿಕೆ ಉಚಿತ ತರಬೇತಿಯನ್ನು ನಡೆಸಲಾಯಿತು.
ನಗರದ ಕೆ ಎಸ್ ಆರ್ ಟಿ ಸಿ ನಿಲ್ದಾಣದ ಮೊದಲನೆ ಮಹಡಿಯಲ್ಲಿ ಅಯೋಜನೆ ಮಾಡಲಾದ ಭಾರತೀಯ ಉದ್ಯಮ ಶೀಲ ಅಭಿವೃದ್ಧಿ ಸಂಸ್ಥೆ( ಇಡಿಐಐ) ಸಂಸ್ಥೆಯು ಆಯೋಜಿಸಿದ್ದ ತರಬೇತಿ ಪೂರ್ಣಗೊಂಡಿದ್ದು, ತರಬೇತಿ ಪೂರ್ಣಗೊಳಿಸಿದವರಿಗೆ ಪ್ರಮಾಣ ಪತ್ರವನ್ನು ಪಂಚಾಯಿತಿಯ ಸುತ್ತಮುತ್ತಲಿನ ಗ್ರಾಮಗಳ ಸುಮಾರು 55 ಮಹಿಳೆಯರು ಶಿಬಿರದ ಪ್ರಯೋಜನ ಪಡೆದರು.
ಇಡಿಐಐ ಸಂಸ್ಥೆಯ ಯೋಜನಾ ಸಂಸ್ಥಾಪಕಿ ಲಲಿತಾರವರು ಕಾರ್ಯಕ್ರಮ ನಡೆಸಿಕೊಟ್ಟರು.
ನಂತರ ಶಿಬಿರಾರ್ಥಿ ಶ್ರೀಮತಿ, ರಮ್ಯಾ ಮಾತನಾಡಿ ತರಬೇತಿಯಲ್ಲಿ ಕಲಿತ ವಿದ್ಯೇಯನ್ನು ನಾವು ಬಳಸಿಕೊಂಡು ಈ ಉದ್ಯಮವನ್ನು ಮುಂದುವರೆಸಿಕೊಂಡು ಇನ್ನು ಹತ್ತಾರು ಜನರಿಗೆ ಈ ಕ್ಷೇತ್ರದಲ್ಲಿ ಹೆಣ್ಣು ಮಕ್ಕಳಿಗೆ ಕೆಲಸ ನೀಡಲು ಸಹಕಾರಿಯಾಗುತ್ತೇನೆ ಎಂದು ತಮ್ಮ ಉದ್ಯಮ ಮನೋಭಾವವನು ವ್ಯಕ್ತಪಡಿಸಿ ಮಹಿಳೆಯರನ್ನು ಉದ್ಯಮ ಕ್ಷೇತ್ರದತ್ತ ಹುರಿದುಂಬಿಸಿದರು.
ಭಾರತೀಯ ಉದ್ಯಮ ಶೀಲ ಅಭಿವೃದ್ಧಿ ಸಂಸ್ಥೆ (ಇಡಿಐಐ) ಸಂಸ್ಥೆಯ ವತಿಯಿಂದ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಪರಿಸರ ಸ್ನೇಹಿ ಕೃತಕ ಆಭರಣ ತಯಾರಿಕೆ ಮುಗಿಸಿದ 55 ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.
ಈ ಸಂದರ್ಭದಲ್ಲಿ ದೇವನಹಳ್ಳಿ ಲೀಡ್ ಬ್ಯಾಂಕ್ ಮ್ಯಾನೇಜರ್ ರಾಮಾಂಜಿ , ನಗರ ಸಭೆ ಸ್ಥಾಯಿ ಸಮಿತಿ ಅಧ್ಯಕ್ಷರು ವಡ್ಡರಹಳ್ಳಿ ರವಿಕುಮಾರ್, ಭಾರತೀಯ ಕಿಸಾನ್ ಸಂಘದ ತಾಲೂಕು ಕಾರ್ಯದರ್ಶಿ ಕುಮಾರ ನಾಯ್ಕ , ದೊಡ್ಡಬಳ್ಳಾಪುರ ಸಮಾಜ ಸೇವಕರುಗಳಾದ ಅಂಬಿಕಾ , ಚಂದ್ರಕಲಾ ಉದ್ಯಮ ಶೀಲತಾ ತರಬೇತಿಯ ಶಿಬಿರಾರ್ಥಿಗಳು ಹಾಜರಿದ್ದರು.
“ಕೃತಕಾ ಆಭರಣ ತಯಾರಿಕೆ ತರಬೇತಿ ನಮ್ಮ ಜೀವನಕ್ಕೆ ಮುಖ್ಯ ಆಶಾದಾಯಕವಾಗಿದೆ ಬಂಗಾರ ದಿನದಿಂದ ದಿನಕ್ಕೆ ಗಗನ ಕುಸುಮವಾಗಿದ್ದು ಬಂಗಾರ ಖರೀದಿಸಲು ಸಾದ್ಯವಾಗದೆ ಇದ್ದಾಗ ಸಾಮಾನ್ಯ ಜನ ಕೃತಕಾ ಆಭರಣ ಬಳಕೆ ತುಂಬಾ ಅನಿವಾರ್ಯವಾಗಿದೆ”.
ಗಾಯಿತ್ರಿ, ಉದ್ಯಮ ಶೀಲತೆಯ ಶಿಬಿರಾರ್ಥಿ.

