ಅರೆಬಿಳಚಿ: 30 ಜನರ ವಿರುದ್ಧ ದೂರು ದಾಖಲು

khushihost

ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ : ಇಲ್ಲಿಗೆ ಸಮೀಪ್ ಹೊಳೆಹೊನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯ ಅರಬಿಳಚಿ ಕ್ಯಾಂಪ್‌ನಲ್ಲಿ ಸದ್ಯ ಪರಿಸ್ಥಿತಿ ಶಾಂತವಾಗಿದೆ,

- Advertisement - 

ಗಣಪತಿ ಮೆರವಣಿಗೆಯ ವೇಳೆ ಡೊಳ್ಳು ಬಾರಿಸುವ ವಿಚಾರದಲ್ಲಿ ಎರಡು ಸಂಘಟನೆಗಳ ನಡುವೆ ಶನಿವಾರ ರಾತ್ರಿ ಆರಂಭವಾದ ಗಲಾಟೆ ದೊಡ್ಡದಾಗಿತ್ತು. ಈ ವೇಳೆ ಪೊಲೀಸರು ಸೇರಿದಂತೆ ಹಲವರಿಗೆ ಗಾಯವಾಗಿತ್ತು.

- Advertisement - 

ಸದ್ಯ ಸ್ಥಳದಲ್ಲಿ ಶಾಂತಿ ನೆಲೆಸಿದ್ದು, ಎರಡು ಪೊಲೀಸ್‌ ತುಕಡಿಗಳು ಅರಬಿಳಚಿ ಕ್ಯಾಂಪ್‌ನಲ್ಲಿ ಮೊಕ್ಕಾಂ ಹೂಡಿದೆ. ಹೆಚ್ಚುವರಿ ಪೊಲೀಸ್‌ ಸಿಬ್ಬಂದಿಯ ಜೊತೆಗೆ ಅಧಿಕಾರಿಗಳು ಸಹ ಸ್ಥಳದಲ್ಲಿದ್ದಾರೆ.

ಅರೆಬಿಳಚಿ ಕ್ಯಾಂಪ್‌ನ ಎಲ್ಲಾ 12 ಗಣಪತಿಯನ್ನು ವಿಸರ್ಜನೆ ಮಾಡಲಾಗಿದೆ.

- Advertisement - 

ಗಲಾಟೆ ಸಂಬಂಧ ಮೂರು ಎಫ್‌ಐಆರ್‌ ದಾಖಲಾಗಿದ್ದು ಒಟ್ಟು 30 ಮಂದಿಯನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.

ಇದರ ನಡುವೆ ಹಲವರು ಪೊಲೀಸರ ಭಯದಿಂದ ಊರು ತೊರೆದಿದ್ದಾರೆ.

Share This Article
error: Content is protected !!
";