ಸ್ಪೀಕರ್ ಭೇಟಿ ಮಾಡಿದ ಶ್ರೀಲಂಕಾ, ನೇಪಾಳ ಪತ್ರಕರ್ತರ ನಿಯೋಗ

News Desk

ಸ್ಪೀಕರ್ ಭೇಟಿ ಮಾಡಿದ ಶ್ರೀಲಂಕಾ, ನೇಪಾಳ ಪತ್ರಕರ್ತರ ನಿಯೋಗ.                                         .               ಚಂದ್ರವಳ್ಳಿ ನ್ಯೂಸ್, ಬೆಂಗಳೂರು:                          ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ (ಕೆಯುಡಬ್ಲೂೃಜೆ)ಆಹ್ವಾನದ ಮೇರೆಗೆ ಬಂದಿದ್ದ ಶ್ರೀಲಂಕಾ ಮತ್ತು ನೇಪಾಳ ಪತ್ರಕರ್ತರ ನಿಯೋಗ ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ಮತ್ತು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಅವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿ ಚರ್ಚೆ ನಡೆಸಿತು.

- Advertisement - 

ರಾಜ್ಯದಲ್ಲಿ ವಿಧಾನಸಭೆ ಕಲಾಪಗಳು ಹೇಗೆ ನಡೆಯುತ್ತವೆ ಎನ್ನುವ ಮಾಹಿತಿಯನ್ನು ತಿಳಿದುಕೊಂಡರು ಮತ್ತು ಅಲ್ಲಿರುವ ವ್ಯವಸ್ಥೆಯ ಬಗ್ಗೆಯೂ ಅವರು ಮಾಹಿತಿ ನೀಡಿದರು.

- Advertisement - 

ಎಶಿಯನ್ ಮೀಡಿಯಾ ಕಲ್ಚರಲ್ ಅಸೋಶಿಯೇಶನ್‌ನ ಅಧ್ಯಕ್ಷ ಪುಪಲ್ ಜನಕ ಜಯಸಿಂಗೆ, ಸುಭಾಷಿನಿ ಡಿಸಿಲ್ವಾ, ಶುಭ ರತ್ನಾಯಕೆ, ಬರ್ನಾಡ್, ನೇಪಾಳದ ಹಿರಿಯ ಪತ್ರಕರ್ತರಾದ ಸಂಜೋತಾ ಗೋಡಲ್, ಸರೋಜ ದಹಲ್, ಕೆಯುಡಬ್ಲೂೃಕೆ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ವಿಧಾನಸಭೆ ಸ್ಪೀಕರ್ ಕಚೇರಿಯ ಸಂಯೋಜಕ ಜ್ಞಾನಶೇಖರ್ ಹಾಜರಿದ್ದರು

- Advertisement - 
Share This Article
error: Content is protected !!
";