ಕಸದ ರಾಶಿ.. ಹೇಳುವರೂ ಇಲ್ಲಾ ಕೇಳುವರೂ ಇಲ್ಲಾ

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಸ್ವಚ್ಛ ಭಾರತ ಆಂದೋಲನವು ಭಾರತದಲ್ಲಿ ನಡೆದ ಅತ್ಯಂತ ಮಹತ್ವದ ಮತ್ತು ಜನಪ್ರಿಯ ಮಿಷನ್‌ಗಳಲ್ಲಿ ಒಂದಾಗಿದೆ. ಸ್ವಚ್ಛಭಾರತ ಆಂದೋಲನವಾದ ಸ್ವಚ್ಛ ಭಾರತ ಮಿಷನ್  ಈ ಸ್ವಚ್ಛ ಭಾರತ ಆಂದೋಲನವನ್ನು ಪ್ರತಿಯೊಂದು ಹಳ್ಳಿ
, ನಗರ, ಹಾಗೂ

ಪಟ್ಟಣಗಳನ್ನು ಸ್ವಚ್ಛವಾಗಿಸಲು ರೂಪಿಸಲಾಗಿದ್ದು  ಸ್ವಚ್ಛ ಭಾರತ ಅಭಿಯಾನವು ಗಾಂಧೀಜಿಯವರ ಕನಸಾಗಿತ್ತು.ಅಂತೆಯೆ ಅದನ್ನು ಭಾರತದ ಪ್ರಧಾನ ಮಂತ್ರಿಗಳಾದ ಸನ್ಮಾನ್ಯ ನರೇಂದ್ರ ಮೋದಿಯವರು ಅಕ್ಟೋಬರ್ 2, 2014 ರಂದು ಗಾಂಧಿ ಜಯಂತಿಯ ದಿನವೆ ಅವರ ಕನಸನ್ನು ನನಸು ಮಾಡಿದರು.

- Advertisement - 

ಅದರೆ ಸ್ವಚ್ಚತೆಯೇ ಮರಿಚಿಕೆಯಾಗಿ  ಮನೆಯ ಮುಂದೆ ಕಸದ ರಾಶಿ ಹಾಕಿ ಅದನ್ನು ತೆರವುಗೂಳಿಸಬೇಕಾದ ಜವಾಬ್ದಾರಿ ಹೊತ್ತ ಸ್ಥಳಿಯ ಜನಪ್ರತಿನಿಧಿಗಳು ಕಂಡರೂ ಕಾಣದೆ ಇರುವುದು ಜನರ ಅಕ್ರೋಶಕ್ಕೆ ಕಾರಣವಾಗಿದೆ ಇಂತಹ ಪ್ರಕರಣ ದೊಡ್ಡಬಳ್ಳಾಪುರ ನಗರಸಭೆ ವ್ಯಾಪ್ತಿಯ

4 ನೇ ವಾರ್ಡಿನ ರೋಜಿಪುರದ  ವಿನಾಯಕ ನಗರ ಮನೆಯೊಂದರ ಮುಂದೆ ಕಸದ ರಾಶಿಯೇ ಬಿದ್ದಿದೆ. ಇದರಿಂದ ಇಲ್ಲಿ ಇಲಿ ಹೆಗ್ಗಣ  ಹಾವುಗಳಿಂದ ಸುತ್ತ ಮುತ್ತಲಿನ ಮನೆಯವರಿಗೆ ಹಾಗು ಸಾರ್ವಜನಿಕರಿಗೂ ತುಂಬಾ  ತೊಂದರೆಯಾಗುತ್ತಿದೆ ಎಂದು ವಾರ್ಡಿನ ಸಧಸ್ಯರಿಗೆ ದೂರು ನೀಡದರೂ ಯಾವುದೇ ಪ್ರಯೋಜನವಾಗಿಲ್ಲ.

- Advertisement - 

ಅಧಿಕಾರಿಗಳಿಗೆ ದೂರು ನೀಡದರೆ ಅವರೂ ಸಹಾ ಗಮನ ಹರಿಸುತ್ತಿಲ್ಲ.ಯಾರಿಗೆ ನಮ್ಮ ಕಷ್ಟಗಳು ಹೇಳುವುದು ಈ ದೌರ್ಬಾಗ್ಯಕ್ಕೆ ಇಲ್ಲವಾ ಕಡಿವಾಣ ಎನ್ನುವುದು ವಿನಾಯಕ ನಗರದ ನಾಲ್ಕನೆ ವಾರ್ಡಿನ ಸ್ಥಳಿಯರಾದ  ಅಶ್ವತ್ತಮ್ಮ ಅವರ ಅಳಲು.

 

Share This Article
error: Content is protected !!
";