ನೀರಿನಲ್ಲಿ ಮುಳುಗಿ ಆತ್ಮಹತ್ಯೆ ಯತ್ನಿಸುತ್ತಿದ್ದ ವ್ಯಕ್ತಿ ರಕ್ಷಿಸಿದ ಪೊಲೀಸರು

News Desk

 ಚಂದ್ರವಳ್ಳಿ ನ್ಯೂಸ್, ತೀರ್ಥಹಳ್ಳಿ :
ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶದಿಂದ ಕೆರೆಗೆ ಧುಮುಕಿ ನೀರಿನಲ್ಲಿ ಮುಳುಗುತ್ತಿದ್ದ ವ್ಯಕ್ತಿಯೋರ್ವರನ್ನು, ಸಿನಿಮೀಯ ಶೈಲಿಯಲ್ಲಿ ಪೊಲೀಸರಿಬ್ಬರು ರಕ್ಷಿಸಿ ಜೀವ ಉಳಿಸಿದ ಘಟನೆ, ತೀರ್ಥಹಳ್ಳಿ ತಾಲೂಕಿನ ಯಡೆಹಳ್ಳಿ ಗ್ರಾಮದಲ್ಲಿ ನಡೆದಿದೆ.

- Advertisement - 

ಮಾಳೂರು ಪೊಲೀಸ್ ಠಾಣೆ ಹೆಡ್ ಕಾನ್ಸ್ಟೇಬಲ್ ರಾಮಪ್ಪ ಹಾಗೂ ಡಿಎಆರ್ ವಾಹನ ಚಾಲಕರಾದ ಎ.ಹೆಚ್.ಸಿ. ಲೋಕೇಶ್ ಅವರೇ ನೀರಿನಲ್ಲಿ ಮುಳುಗುತ್ತಿದ್ದ ವ್ಯಕ್ತಿಯ ಜೀವ ಉಳಿಸಿದವರು.

- Advertisement - 

 ಘಟನೆಯ ಹಿನ್ನೆಲೆ :
ಸೆ. ೧೭ ರಂದು ರಾತ್ರಿ, ವ್ಯಕ್ತಿಯೊಬ್ಬರು ತೀರ್ಥಹಳ್ಳಿಯ ಯಡೇಹಳ್ಳಿ ಕೆರೆಯಲ್ಲಿ ಮುಳುಗಿ ಆತ್ಮಹತ್ಯೆಗೆ ಪ್ರ್ರಯತ್ನಿಸುತ್ತಿದ್ದಾರೆಂದು ಪೊಲೀಸ್ ಸಹಾಯವಾಣಿಗೆ ಸಾರ್ವಜನಿಕರು ಕರೆ ಮಾಡಿ ಮಾಹಿತಿ ನೀಡಿದ್ದರು. ಈ ಮಾಹಿತಿ ಆಧಾರದ ಮೇಲೆ ಮಾಳೂರು ಠಾಣೆ ವ್ಯಾಪ್ತಿಯಕರ್ತವ್ಯದಲ್ಲಿದ್ದ ರಾಮಪ್ಪ ಹಾಗೂ ಚಾಲಕ ಲೋಕೇಶ್ ಅವರು ತ್ವರಿತಗತಿಯಲ್ಲಿ ಘಟನಾ ಸ್ಥಳಕ್ಕೆ ಆಗಮಿಸಿದಾಗ ಕೆರೆ ಸಮೀಪದ ಅಂಗನವಾಡಿ ಕಟ್ಟಡದ ಬಳಿ ಕಾರೊಂದು ನಿಂತಿರುವುದನ್ನು ಗಮನಿಸಿದ್ದಾರೆ.

- Advertisement - 

ಕೆರೆಯ ಬಳಿ ಶೋಧಿಸಿದಾಗ, ಕೆರೆ ನೀರಿನಲ್ಲಿ ವ್ಯಕ್ತಿಯೋರ್ವರು ಮುಳುಗುತ್ತಿರುವುದು ಕಂಡುಬಂದಿದೆ. ನೀರಿಗೆ ಧುಮುಕಿ ಅವರನ್ನು ರಕ್ಷಣೆ ಮಾಡಿ ದಡಕ್ಕೆ ತಂದಿದ್ದಾರೆ.

Share This Article
error: Content is protected !!
";