ಸರ್ಕಾರಿ ಜಮೀನು ಕಬಳಿಸುವುದರಲ್ಲೂ ಎತ್ತಿದ “ಕೈ”

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕಾಂಗ್ರೆಸ್‌ನಾಯಕರು ಭ್ರಷ್ಟಾಚಾರದಲ್ಲಷ್ಟೇ ಅಲ್ಲ, ಸರ್ಕಾರಿ ಜಮೀನು ಕಬಳಿಸುವುದರಲ್ಲೂ ಎತ್ತಿದ “ಕೈ” ಎಂದು ಜೆಡಿಎಸ್ ವಾಗ್ದಾಳಿ ಮಾಡಿದೆ. ಸರ್ಕಾರದ ಆಸ್ತಿಗೆ ಕನ್ನ ಹಾಕುವುದರಲ್ಲಿ ಕರ್ನಾಟಕ ಕಾಂಗ್ರೆಸ್ ನಾಯಕರು ನಾ ಮುಂದು, ತಾ ಮುಂದೆ ಅಂತ ಪೈಪೋಟಿ ನೀಡುತ್ತಿದ್ದಾರೆ.

- Advertisement - 

ಈಗ ಕಂದಾಯ ಸಚಿವ ಕೃಷ್ಣಭೈರೇಗೌಡ ಅವರು ಅಧಿಕಾರ ದುರ್ಬಳಕೆ ಮಾಡಿಕೊಂಡು, ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ 10 ಎಕರೆ ಸರ್ಕಾರಿ ಗೋಮಾಳದ ಜಾಗವನ್ನು ಪೋಡಿ, ನಕ್ಷೆಯಾಗದೆ ಅಕ್ರಮವಾಗಿ ತಮ್ಮ ಬೆಂಬಲಿಗರಿಗೆ ಪರಭಾರೆ ಮಾಡಿಕೊಟ್ಟಿದ್ದಾರೆ ಎಂದು ಜೆಡಿಎಸ್ ಗಂಭೀರ ಆರೋಪ ಮಾಡಿದೆ. 

- Advertisement - 

ಈ ಬಗ್ಗೆ ದಾಖಲೆಗಳ ಸಮೇತ ರಾಜ್ಯಪಾಲರಿಗೆ ದೂರು ಸಲ್ಲಿಸಿರುವ ಸಾಮಾಜಿಕ ಕಾರ್ಯಕರ್ತರೊಬ್ಬರು ಭೂಗಳ್ಳತನಕ್ಕೆ ಸಹಕರಿಸಿರುವ ಕೃಷ್ಣಭೈರೇಗೌಡ ವಿರುದ್ಧ ತನಿಖೆಗೆ ಆಗ್ರಹಿಸಿದ್ದಾರೆ ಎಂದು ಜೆಡಿಎಸ್ ತಿಳಿಸಿದೆ.

 

- Advertisement - 

Share This Article
error: Content is protected !!
";