ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಭಾರತದ ಮೇಲೆ ದಾಳಿ ನಡೆಸಿದ್ದು ಪಾಕಿಸ್ತಾನವಷ್ಟೇ ಅಲ್ಲ, ಅದರ ಜೊತೆಗೆ ದ್ರೋಹಿ ಟರ್ಕಿಯೂ ಸೇರಿಕೊಂಡಿತ್ತು ಎನ್ನುವ ಸಾಕ್ಷಿಯನ್ನು ಕೇಂದ್ರ ಸರ್ಕಾರ ನೀಡಿದೆ ಎಂದು ಬಿಜೆಪಿ ಹೇಳಿದೆ.
ಭೂಕಂಪದ ವೇಳೆ ಭಾರತ ಟರ್ಕಿಗೆ ನೆರವು ನೀಡಿತ್ತು. ಆದರೆ, ದ್ರೋಹಿ ಟರ್ಕಿ ಇದನ್ನು ಮರೆತು ಪಾಪಿ ಪಾಕಿಸ್ತಾನಕ್ಕೆ ಡ್ರೋನ್ ಗಳನ್ನು ನೀಡಿದ್ದು ಅಲ್ಲದೆ ಅದರ ನಿರ್ವಾಹಕರನ್ನು ಕಳಿಸಿಕೊಟ್ಟು ಬಲಿ ನೀಡಿದೆ.
ಕೇವಲ 23 ನಿಮಿಷಗಳಲ್ಲಿ ಪಾಕ್ ದಾಳಿಯನ್ನು ವಿಫಲಗೊಳಿಸಿದ್ದು ಅಲ್ಲದೆ ಟರ್ಕಿಯ ಡ್ರೋನ್ ಗಳನ್ನು ಹೊಡೆದು ಹಾಕಿ ಅವುಗಳ ನಿರ್ವಾಹಕರನ್ನು ಭಾರತೀಯ ಸೇನೆ ಸದೆಬಡಿದಿದೆ ಎಂದು ಬಿಜೆಪಿ ತಿಳಿಸಿದೆ.