ಚಂದ್ರವಳ್ಳಿ ನ್ಯೂಸ್, ದಾವಣಗೆರೆ:
ಮಹಿಳೆ ಒಬ್ಬರನ್ನು ಅರೆಬೆತ್ತಲೆಗೊಳಿಸಿ ಅಮಾನುಷವಾಗಿ ಹಲ್ಲೆ ಮಾಡಿರುವ ಘಟನೆಯ ವಿಡಿಯೋ ವೈರಲ್ ಆಗಿದೆ.
ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಗೋಣಿಕೊಪ್ಪಲು ಗ್ರಾಮದಲ್ಲಿ ಒಂದೂವರೆ ವರ್ಷದ ಹಿಂದೆ ನಡೆದಿದ್ದ ಹಲ್ಲೆ
ವಿಡಿಯೋ ಈಗ ವೈರಲ್ ಆಗಿದೆ. ಏನಿದು ಘಟನೆ-
ನಿವೃತ್ತ ಬ್ಯಾಂಕ್ ಮ್ಯಾನೇಜರ್ ಗುರುಮೂರ್ತಿ ಅವರ ಪತ್ನಿ ಮೇಲೆ ಕೆಲ ಮಹಿಳೆಯರು ಮನಬಂದಂತೆ ತಳಿಸಿರುವುದು ವಿಡಿಯೋದಲ್ಲಿದೆ.
ವಿಕಲಾಂಗ ಪತಿ ಗುರುಮೂರ್ತಿ ಎದುರಿಗೇ ಮಹಿಳೆ ಮೇಲೆ ಹಲ್ಲೆ ನಡೆಸಲಾಗಿದ್ದು, ಘಟನೆಯ ದೃಶ್ಯ ಸಿಸಿ ಕ್ಯಾಮರಾದಲ್ಲಿ ದಾಖಲಾಗಿದೆ. ಹಲ್ಲೆಯ ಬಗ್ಗೆ ದೂರು ನೀಡಲು ಹೋದರೆ ಚನ್ನಗಿರಿ ಪೊಲೀಸರು ಇದುವರೆಗೂ ಕೇಸ್ ಪಡೆದಿಲ್ಲ ಎಂಬ ಆರೋಪ ಕೂಡ ಕೇಳಿ ಬಂದಿದೆ.

