ಚಂದ್ರವಳ್ಳಿ ನ್ಯೂಸ್, ತುಮಕೂರು:
ತುಮಕೂರು ನಗರದಲ್ಲಿರುವ ಗಂಡ ಪ್ರಜ್ವಲ್ ಶಂಕರ್ ಮನೆ ಮುಂದೆ ಕೂತು ಪತ್ನಿ ಸುಪ್ರಿಯರಾಣಿ ನ್ಯಾಯ ಬೇಕು ಅಂತ ಪ್ರತಿಭಟನೆ ನಡೆಸುತ್ತಿದ್ದಾರೆ.
8 ತಿಂಗಳ ಹಿಂದೆ ಮದುವೆಯಾದ ಇವರಿಗೆ ಗಂಡನ ಮನೆಗೆ ಬಂದ ನಾಲ್ಕನೇ ದಿನದಿಂದಲೇ ವರದಕ್ಷಿಣೆ ಕಿರುಕುಳ ಶುರುವಾಗಿದೆ.
ಒಂದು ಚಿಕ್ಕ ಹೋಟೆಲ್ ಇಟ್ಟುಕೊಂಡಿರುವ ಸುಪ್ರಿಯ ತಂದೆ-ತಾಯಿ 20 ಲಕ್ಷ ಖರ್ಚು ಮಾಡಿ ಮಗಳ ನಿಶ್ಚಿತಾರ್ಥ ಮತ್ತು ಮದುವೆ ಮಾಡಿದ್ದಾರೆ.
ಮದುವೆ ಸಮಯದಲ್ಲಿ 130 ಗ್ರಾಂ ಚಿನ್ನ ಹಾಗೂ 2 ಕೆಜಿ ಬೆಳ್ಳಿ ನೀಡಿದ್ದಾರಂತೆ. ಗಂಡ ತನ್ನನ್ನು ಬೇಡ ಅನ್ನುತ್ತಿರುವುದರಿಂದ ತನಗೆ ಸೇರಿದ ಒಡವೆ, ಬೇರೆ ವಸ್ತುಗಳು ಅವರ ಮನೆಯಲ್ಲೇ ಇವೆ, ವಾಪಸ್ಸು ಕೊಡಲಿ ಎಂದು ಸುಪ್ರಿಯ ಧರಣಿಗೆ ಕೂತಿರುವ ಘಟನೆ ಬೆಳಕಿಗೆ ಬಂದಿದೆ.

