ಸರ್ಕಾರಿ ಜಮೀನಿನಲ್ಲಿ ಅಕ್ರಮ ಮನೆ ನಿರ್ಮಾಣ ಆರೋಪ

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ :
ನಿರ್ಗತಿಕ ಕಡು ಬಡವರಿಗಾಗಿ
  ಆಶ್ರಯ ಯೋಜನೆ ಅಡಿಯಲ್ಲಿ ಮೀಸಲಿಟ್ಟಿರುವ ಸ್ಥಳದಲ್ಲಿ ಪ್ರಭಾವಿಗಳು ಕಟ್ಟಡ ನಿರ್ಮಾಣಕ್ಕೆ ಮುಂದಾಗಿದ್ದು  ಈ ಕುರಿತು ದೊಡ್ಡಬೆಳವಂಗಲ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು  ಯಾವುದೇ ಪ್ರಯೋಜನವಾಗಿಲ್ಲ  ಅನಧಿಕೃತವಾಗಿ ನಿರ್ಮಾಣ ಮಾಡಲಾಗುತ್ತಿರುವ ಕಟ್ಟಡವನ್ನು ಈ ಕೂಡಲೇ ಅಧಿಕಾರಿಗಳು ನಿಲ್ಲಿಸಬೇಕು ಎಂದು ಆಗ್ರಹಿಸಿ ರಾಂಪುರ ಗ್ರಾಮಸ್ಥರು  ಪ್ರತಿಭಟನೆ ನಡೆಸಿದರು. 

ತಾಲೂಕಿನ ದೊಡ್ಡ ಬೆಳವಂಗಲ ಹೋಬಳಿಯ ರಾಂಪುರ ಗ್ರಾಮದಲ್ಲಿ ಸರ್ವೇ ನಂಬರ್ 129ರಲ್ಲಿ ಒಟ್ಟು ಮೂರು ಎಕರೆ ಒಂಬತ್ತು (3.9)ಗುಂಟೆ ಜಾಗವಿದೆ ಸದರಿ ಜಾಗದಲ್ಲಿ ಎರಡು ಎಕರೆ ಪ್ರದೇಶವನ್ನು  ಆಶ್ರಯ ಯೋಜನೆಗೆ ಮೀಸಲಿಡಲಾಗಿದ್ದು ಈ ಸಂಬಂಧ ಜಿಲ್ಲಾಧಿಕಾರಿಗಳು ಆದೇಶವನ್ನು ಕೂಡ ಮಾಡಿದ್ದಾರೆ. ಆದರೆ ಉಳಿದ ಒಂದು ಎಕರೆ ಒಂಬತ್ತು (1.9)ಗುಂಟೆ ಜಾಗವನ್ನು  ತುರೆಮಂದಿ ಎಂದು ನಿಗದಿ ಮಾಡಲಾಗಿದ್ದು ಸದರಿ ಜಾಗದಲ್ಲಿ  ಬಲಾಢ್ಯ ಪ್ರಭಾವಿಗಳು ಮನೆಗೆ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಕಟ್ಟಡ ನಿರ್ಮಾಣ ಕಾರ್ಯವನ್ನು ಸ್ಥಗಿತಗೊಳಿಸುವಂತೆ ಕೋರಿ ಸ್ಥಳೀಯ ಪಂಚಾಯಿತಿ ಕಚೇರಿಗೆ  ಹಲವಾರು ಬಾರಿ ಅರ್ಜಿ ಸಲ್ಲಿಸಿದರು. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡದೆ  ನಿರ್ಲಕ್ಷ ವಹಿಸಿದ್ದಾರೆ. ನಮ್ಮ ಗ್ರಾಮಕ್ಕೆ ಸರ್ಕಾರಿ ಜಾಗವನ್ನು ಉಳಿಸಿಕೊಡಬೇಕು ಎಂದು ರಾಂಪುರ ಗ್ರಾಮಸ್ಥರು ಅಗ್ರಹಿಸಿದರು.

- Advertisement - 

ಸ್ಥಳೀಯ ಗ್ರಾಮಸ್ಥ ಆರ್ ಜಿ  ರುದ್ರೇಗೌಡ ಮಾತನಾಡಿ ನಮ್ಮ ಗ್ರಾಮದ ಸೌಲಭ್ಯಕ್ಕಾಗಿ ಇರುವ  ತುರೆಮಂದಿ ಜಮೀನಿನಲ್ಲಿ ಪ್ರಭಾವಿಗಳು ಮನೆ ಕಟ್ಟಲು ಮುಂದಾಗಿದ್ದಾರೆ . ಸರ್ಕಾರಿ ಜಾಗವನ್ನು ಉಳಿಸಬೇಕಿರುವ ಪಂಚಾಯಿತಿ  ಅಧಿಕಾರಿಗಳಿಗೆ ನಾವು ಎಷ್ಟೇ ಮನವಿ ಸಲ್ಲಿಸಿ ಅರ್ಜಿ ಕೊಟ್ಟರು  ಈವರೆಗೂ ಸ್ಥಳಕ್ಕೆ ಭೇಟಿ ನೀಡಿಲ್ಲ  ಕಟ್ಟಡ ನಿರ್ಮಾಣ ಕಾರ್ಯವನ್ನು ಸ್ಥಗಿತಗೊಳಿಸಿಲ್ಲ  ಅಧಿಕಾರದಲ್ಲಿರುವ ಬಲಾಡ್ಯರಿಗೆ ಅಧಿಕಾರಿಗಳು ಬೆಂಬಲಿಸುತ್ತಿದ್ದಾರೆ ಎಂದು ಮೇಲ್ನೋಟಗೆ ಕಾಣಿಸುತ್ತಿದೆ  ಈ ನಡವಳಿಕೆಯನ್ನು ಖಂಡಿಸಿ ಇಂದು ರಾಂಪುರ ಗ್ರಾಮಸ್ಥರು  ಅಧಿಕಾರಿಗಳ ವಿರುದ್ಧ ಪ್ರತಿಭಟನೆ ಕೈಗೊಂಡಿದ್ದೇವೆ  ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ  ಸಮಸ್ಯೆ ಬಗೆಹರಿಸಬೇಕು ಎಂದು ಆಗ್ರಹಿಸಿದರು. 

ದೊಡ್ಡಬೆಳವಂಗಲ  ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಆದರ್ಶ್ ಕುಮಾರ್ ಗ್ರಾಮಸ್ಥರ ಮಾತಿಗೆ ಕಿಮ್ಮತ್ತು ಬೆಲೆ ಕೊಡುವುದಿಲ್ಲ ಗ್ರಾಮಸ್ಥರು ಯಾವುದೇ ಅರ್ಜಿ ಕೊಟ್ಟರು ಮನವಿ ಮಾಡಿದರು ಕ್ಯಾರೆ ಎನ್ನುತ್ತಿಲ್ಲ.  ಗ್ರಾಮ ನೈರ್ಮಲ್ಯ ಸ್ವಚ್ಛತೆಗೆ ಆದ್ಯತೆ ನೀಡಬೇಕು   ಆದರೆ ನಮ್ಮ ಗ್ರಾಮಕ್ಕೆ ಕಸದ ಗಾಡಿ ಬಂದು ಒಂದು ತಿಂಗಳಾಗಿದೆ  ಕುಡಿಯುವ ನೀರು ಸ್ಥಗಿತಗೊಂಡು ಒಂದು ವಾರ ಆಗಿದೆ ಅಲ್ಲದೆ ಗ್ರಾಮದಲ್ಲಿ ಇಷ್ಟೆಲ್ಲ ಸಮಸ್ಯೆಯಾಗುತ್ತಿದ್ದರು  ಯಾರೊಬ್ಬ ಅಧಿಕಾರಿಯು  ಗ್ರಾಮಕ್ಕೆ ಭೇಟಿ ನೀಡಿಲ್ಲ  ಪಂಚಾಯಿತಿ ಅಧಿಕಾರಿಗಳ ನಿರ್ಲಕ್ಷಕ್ಕೆ ಬೇಸರಗೊಂಡು   ನಮ್ಮ ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯರಾದ ರಮೇಶ್  ರಾಜೀನಾಮೆ ನೀಡಿದ್ದಾರೆ. ಇನ್ನಾದರೂ ಪಂಚಾಯಿತಿ ಅಧಿಕಾರಿಗಳು ಕಾರ್ಯಯೋನ್ಮುಖರಾಗಿ ನಮ್ಮ ಗ್ರಾಮಗಳ ಕಡೆ ಗಮನ ಹರಿಸಬೇಕು  ಎಂದು ಗ್ರಾಮಸ್ಥರಾದ ಜಯರಾಮ್ ತಿಳಿಸಿದರು. 

- Advertisement - 

 ಈ ರಾಂಪುರ ವ್ಯಾಪ್ತಿಯಲ್ಲಿ  ವಡ್ಡರ ಪಾಳ್ಯವಲೇರಹಳ್ಳಿರಾಂಪುರರಾಂಪುರ ಕಾಲೋನಿಭಕ್ತರಹಳ್ಳಿ ಗ್ರಾಮಗಳು ಒಳಗೊಂಡಿದ್ದು, ಗ್ರಾಮಗಳಲ್ಲಿ ಸಮಸ್ಯೆಗಳು ಸಾಕಷ್ಟಿವೆ ಅಧಿಕಾರದ ಶಕ್ತಿ ಇರುವ  ಪಂಚಾಯಿತಿ ಅಧ್ಯಕ್ಷರು ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ನಿರ್ಲಕ್ಷತೆಯಿಂದ  ಯಾವುದೇ ಸಮಸ್ಯೆ ಬಗ್ಗೆಹರಿಯುತ್ತಿಲ್ಲ  ಗ್ರಾಮ ಪಂಚಾಯತಿ ಸದಸ್ಯರಾಗಿ  ಸಾರ್ವಜನಿಕರಿಗೆ ಉತ್ತರಿಸಲು ಸಾಧ್ಯವಾಗುತ್ತಿಲ್ಲ ಹಾಗಾಗಿ ಮನನೊಂದು ನನ್ನ ಹುದ್ದೆಗೆ ರಾಜಿನಾಮೆ ನೀಡಿದ್ದೇನೆ  ಆದರೆ ಈವರೆಗೂ  ನನ್ನ ರಾಜೀನಾಮೆಗೆ ಕಾರಣವೇನು ಎಂಬ ವಿಚಾರವಾಗಿ  ಯಾರೊಬ್ಬರೂ ತಲೆಕೆಡಿಸಿಕೊಂಡಿಲ್ಲ, ಸ್ಥಳೀಯವಾಗಿ ನಡೆದಿರುವ ಕಾಮಗಾರಿಗಳ ಬಗ್ಗೆ  ಮಾಹಿತಿ ಹಕ್ಕು ಅಡಿಯಲ್ಲಿ ಮಾಹಿತಿ ಕೇಳಿದ್ದು ಈವರೆಗೂ  ನೀಡಿಲ್ಲ ಸ್ಥಳೀಯ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಅಧಿಕಾರಿಗಳು ಇನ್ನಾದರೂ ಚಿಂತಿಸಲಿ ಎಂದು ಅಗ್ರಹಿಸಿದರು. 

 ಈ ಸಂದರ್ಭದಲ್ಲಿ ಪ್ರಾಂತ್ಯ ರೈತ ಸಂಘದ ಮುಖಂಡರಾದ ಪ್ರಭಾ ಬೆಳವಂಗಲ, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಶಶಿಧರ್ , ವಾಲ್ಮಿಕಿ ಸಂಘದ ಅಧ್ಯಕ್ಷ ಶಿವಕುಮಾರ್ ಮುಖಂಡರಾದ ಆಂಜಿನಪ್ಪ ಧನಂಜಯ್, ರಾಮಣ್ಣ,ರಾಂಪುರ ಹಾಗೂ ಕಾಲೋನಿಯ ಗ್ರಾಮಸ್ಥರು ಹಾಜರಿದ್ದರು.

 

 

Share This Article
error: Content is protected !!
";