ಚಂದ್ರವಳ್ಳಿ ನ್ಯೂಸ್, ವಿಜಯಪುರ:
ಅಂಬೇಡ್ಕರ್ ಅವರ ಜಯಂತಿ
ಭಾರತದ ಭಾಗ್ಯ ವಿಧಾತ..
ಅನಿಕೇತನರ ಮಹಾಚೇತನ
ನಿಮ್ಮ ಅಚಲ ಸ್ವಾಭಿಮಾನವೇ
ನಮ್ಮೆಲ್ಲರ ಬದುಕಿನ ಸಾಧನೆ..
ಅನಿಷ್ಟಗಳ ಶಿಕ್ಷಿಸಲು
ಶಿಕ್ಷಣವೆಂಬ ಭೀಮಾಸ್ತ್ರವನ್ನು
ಬಡವರ ಕೈಗಿಟ್ಟ ಬಲ ಭೀಮ..
ನೊಂದು ಬೆಂದು ಬಂದವರಿಗೆ
ಕರಿಕೋಟು ತೊಟ್ಟು ನ್ಯಾಯವನ್ನು ಒದಗಿಸಿದ
ಧ್ವನಿ ಇಲ್ಲದವರಿಗೆ ದ್ವನಿಯಾದ ಪುಣ್ಯಾತ್ಮ..
ಮಾತೃತ್ವದ ಹೆರಿಗೆಯ ರಜೆಗಾಗಿ ಮಹಿಳೆಯರ ಹಕ್ಕುಗಳಿಗಾಗಿ
ಹೋರಾಡಿದ ಮಹಾನ್ ರಕ್ಷಕ …
ಜಾತಿ ಮತಗಳ ಕೊಳೆ ತೊಳೆಯಲು ತೊಡೆತಟ್ಟಿ ನಿಂತಹ ಮಹಾನಾಯಕ..
ಸಮಾನತೆಗಾಗಿ ಹೋರಾಡಿದ
ಸ ಹೃದಯದ ಸಾಹುಕಾರ..
ಮೊದಲಿರಲಿ ಕೊನೆಯಿರಲಿ
ನಾವೆಲ್ಲರೂ ಭಾರತೀಯರಂದ ಹಮ್ಮೀರ…
ಭಾರತದ ಭಾಗ್ಯ ವಿಧಾತ ನೀವೊಬ್ಬರೇ
ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್..
ಎಂದೆಂದಿಗೂ ನೀವು ಅಜರಾಮರು….
ಕವಿತೆ: ಅಮೃತಾ ಸಿದ್ದಪಾ ಚೌಧರಿ, ವಿಜಯಪುರ.

