ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸಿನೆಮಾದ ನಾಯಕ ನಟ ಬಾಲಕೃಷ್ಣ ತೆಲುಗು ಸಿನಿಮಾ ಲೋಕದ ಜನಪ್ರಿಯ ನಟರಾಗಿ ಸೀಮಾಂಧ್ರ ರಾಜ್ಯದಲ್ಲಿ ಶಾಸಕರಾದ ಇವರಿಗೆ ಭಾರತ ಸರ್ಕಾರದ ಪ್ರತಿಷ್ಟಿತ ಪದ್ಮಭೂಷಣ ಪ್ರಶಸ್ತಿ ಲಭಿಸಿದೆ.
ತೆಲುಗು ಚಿತ್ರೋದ್ಯಮದ ಪ್ರಖ್ಯಾತ ನಟರಾಗಿ ಅಖಂಡ ಆಂಧ್ರ ಪ್ರದೇಶಕ್ಕೆ ಎರಡುಬಾರಿ ಮುಖ್ಯಮಂತ್ರಿಯಾಗಿದ್ದ ದಿವಂಗತ ಎನ್ ಟಿ ರಾಮರಾವ್ ಅವರ ಕೊನೆಯ ಪುತ್ರ ಬಾಲಕೃಷ್ಣ ಅವರು ತೆಲುಗು ಸಿನಿಮಾ ಲೋಕಕ್ಕೆ ಬಾಲನಟನಾಗಿ ಪ್ರವೇಶಿಸಿ ನಂತರದಲ್ಲಿ ಜನಪ್ರಿಯ ನಾಯಕನಟನಾಗಿ ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿಗೆ ಹೊಂದಿಕೊಂಡಿರುವ ಹಿಂದೂಪುರ ವಿಧಾನಸಭಾ ಕ್ಷೇತ್ರದಲ್ಲಿ 3 ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಬಾಲಕೃಷ್ಣ ಅವರು ಕ್ಷೇತ್ರವನ್ನು ಪ್ರಗತಿಯತ್ತ ಕೊಂಡೊಯ್ಯುವ ಮೂಲಕ ಸಾಮಾಜಿಕವಾಗಿ ಹಾಗೂ ಜನಪರವಾಗಿ ಬೆಳೆದಿದ್ದಾರೆ.
ಹಿಂದೂಪುರ ಪಟ್ಟಣದಲ್ಲಿ ಬಾಲಕೃಷ್ಣ ಅವರ ಅಧ್ಯಕ್ಷತೆಯಲ್ಲಿ ಬಸವತಾರಕಂ ಎಂಬ ಉನ್ನತ ದರ್ಜೆಯ ಆಸ್ಪತ್ರೆ ಇದೆ. ಈ ಆಸ್ಪತ್ರೆಯಲ್ಲಿ ಕ್ಯಾನ್ಸರ್ ಸಂಬಂಧಿತ ಹಾಗೂ ಕಿಡ್ನಿ ವೈಫಲ್ಯಕ್ಕೆ ಎಲ್ಲಾ ರೀತಿಯಲ್ಲಿ ಉಚಿತ ಚಿಕಿತ್ಸೆ ನೀಡಲಾಗುವುದು. ಈ ವಿಚಾರ ಅವರಲ್ಲಿರುವ ಸೇವಾ ಪರಿಕಲ್ಪನೆಯನ್ನು ಪ್ರತಿಪಾದಿಸುತ್ತದೆ.
ಚಿತ್ರ ನಟನೆಗಾಗಿ ನಂದಮೂರಿ ಬಾಲಕೃಷ್ಣ ಅವರಿಗೆ ಪದ್ಮಭೂಷಣ ಪ್ರಶಸ್ತಿ ನೀಡಲಾಗಿರುವ ವಿಚಾರ ಗೌರವಪೂರ್ವಕವಾಗಿದೆ. ಬಾಲಕೃಷ್ಣ ಅವರ ತಂದೆ ಎನ್ ಟಿ ರಾಮರಾವ್ ಅವರಿಗೂ ಬಹಳಷ್ಟು ವರ್ಷಗಳ ಹಿಂದೆ ಪದ್ಮಭೂಷಣ ಪ್ರಶಸ್ತಿ ಲಭಿಸಿತ್ತು. ಬಾಲಕೃಷ್ಣ ಅವರ ಸಿನಿಮಾಗಳು ಆಕ್ಷನ್, ಸೆಂಟಿಮೆಂಟ್ ಹಾಗೂ ಹಾಡುಗಳ ನೃತ್ಯ ವೈಭವವು ಯುವಕರನ್ನು ಸೆಳೆಯಲು ಯಶಸ್ಸು ಕಂಡಿದ್ದೇ. ಬಾಲಕೃಷ್ಣ ಅಭಿನಯದ ಹಲವು ಸಿನಿಮಾಗಳನ್ನು ನಾನು ಇಷ್ಟಪಟ್ಟು ನೋಡಿದ್ದೇನೆ. ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನ ಚಿತ್ರಪ್ರೇಮಿಗಳು ಬಾಲಕೃಷ್ಣ ಅವರ ಸಿನಿಮಾಗಳನ್ನು ನೋಡಿ ಇಷ್ಟಪಟ್ಟು ಸಂಭ್ರಮಿಸಿದ್ದಾರೆ ಎಂದು ರಘು ಗೌಡ ತಿಳಿಸಿದ್ದಾರೆ.